News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಜೀಪ ಕೆಂಜಿಲಪದವಿನಲ್ಲಿ “ಸಾಮರಸ್ಯ ತುಡರ್” ಕಾರ್ಯಕ್ರಮ

ಮಂಗಳೂರು: ಸಜೀಪ ಕೆಂಜಿಲಪದವಿನಲ್ಲಿ ಹಿಂದೂ ಸಮಾಜ ಬಾಂಧವರು ಸೇರಿ “ಸಾಮರಸ್ಯ ತುಡರ್” ಕಾರ್ಯಕ್ರಮ ಆಯೋಜಿಸಿದರು.

ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಯ ನಂತರ ಕೆಂಜಿಲಪದವಿನ ಪ್ರಮುಖರಾದ ನೋಣಯ್ಯರವರು ಸಾಮರಸ್ಯದ ತುಡರ್ ಅನ್ನು ಸ್ವೀಕಾರ ಮಾಡಿದರು. ನಂತರ ಕೆಂಜಿಲಪದವು ಅಂಬೇಡ್ಕರ್ ಭವನದಿಂದ ಸಾಧ್ವಿ ಮಾತಾನಂದಮಯಿ ಉಪಸ್ಥಿತಿಯಲ್ಲಿ ಭಜನೆ ಚೆಂಡೆ ಮೂಲಕ ” ಸಾಮರಸ್ಯದ ತುಡರ್” ಮೆರವಣಿಗೆಯ ಮೂಲಕ ನೋಣಯ್ಯರವರ ಮನೆಗೆ ತಲುಪಿಸಿ ನಂತರ ಸಾಮೂಹಿಕ ಗೋಪೂಜೆಯನ್ನು ಒಡಿಯೂರಿನ ಸಾಧ್ವಿ ಮಾತಾನಂದಮಯಿಯವರು ನಡೆಸಿಕೊಟ್ಟರು ನಂತರ ಸಭಾ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರಾಧಕೃಷ್ಣ ಅಡ್ಯಂತಾಯರು ತುಡರ್ ಪರ್ಬದ ಬಗ್ಗೆ ಮಾತನಾಡಿ ಅಸ್ಪೃಶ್ಯತೆ ನಿವಾರಣೆಗೆ ಹಾಗೂ ಹಿಂದೂಗಳ ಒಗ್ಗಟ್ಟಿಗೆ ಈ ಕಾರ್ಯಕ್ರಮ ಮಾದರಿ ಎಂದರು ನಂತರ ಸಾಧ್ವಿ ಮಾತಾನಂದಮಯಿ ಯವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಅದೇ ರೀತಿ ಹಿಂದೂ ಸಮಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಲು ಇದು ಒಂದು ಉತ್ತಮ ಕಾರ್ಯಕ್ರಮ ಹಾಗೂ ನಮ್ಮ ನಮ್ಮಲ್ಲಿ ಪ್ರೀತಿ ವಿಶ್ವಾಸವಿದ್ದರೆ ಮೇಲು ಕೀಲು ಭಾವನೆ ಶ್ರೀಮಂತ ಬಡವನೆಂಬುದು ಇರುವುದಿಲ್ಲ ಸಾಮರಸ್ಯಕ್ಕೆ ಬೇಕಾಗಿರುವುದೇ ನಮ್ಮೆಲ್ಲರಲ್ಲಿ ಪ್ರೀತಿ ನಮ್ಮ ಎಲ್ಲರ ಶರೀರದಲ್ಲಿ ಹರಿಯುವ ರಕ್ತ ಒಂದೇ ಈ ಕಾರ್ಯಕ್ರಮ ನೋಡಿ ನನಗೆ ಅತ್ಯಂತ ಆನಂದವಾಗಿದೆ ಪ್ರತಿಯೊಂದು ಕಡೆಯಲ್ಲೂ ನಾವೆಲ್ಲರೂ ಒಂದೇ ಎನ್ನುವ ಭಾವನೆಯ ಬೆಳಕು ಎಂದರು ಮನೆಯವರಾದ ಚಂದಪ್ಪರವರು ಮಾತನಾಡಿ ತಮ್ಮ ಅನಿಸಿಕೆ ತಿಳಿಸಿದರೂ ವೇದಿಕೆಯಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಅಧ್ಯಕ್ಷತೆಯನ್ನು ಊರಿನ ಹಿರಿಯರಾದ ನೋಣಯ್ಯರವರು ವಹಿಸಿದರು ಕೊನೆಗೆ ಸಹಭೋಜನ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಕೆಟಿ ಸುಧಾಕರ್, ಶಂಭು ಐತಾಳ್ ನರಿಕೊಂಬು, ರಮೇಶ್ ರಾವ್ ಮಂಚಿ, ಭಾಸ್ಕರ್ ಕಂಪದಕೋಡಿ ,ಸಂಘದ ಹಿರಿಯರು ನಾರಾಯಣ ಭಂಡಾರಿ, ಜಿಲ್ಲಾ ಸ್ವಾವಲಂಬನೆ ಪ್ರಮುಖ್ ಅರುಣ್ ಕುಮಾರ್ ಕುಕ್ಕುದಕಟ್ಟೆ, ಗಿರಿಜ ಕೆಂಜಿಲಪದವು, ಸೀತರಾಮ ಅಗೋಳಿಬೆಟ್ಟು, ನಿತಿನ್ ಅರಸ,ಗಣೇಶ್ ಕಾರಾಜೆ,ಲೋಹಿತ್ ಪಣೋಲಿಬೈಲು, ರಮೇಶ್ ತಿರುವಾಳೆ ಮುಂತಾದವರು ಉಪಸ್ಥಿತಿ ಇದ್ದರು ಪ್ರಾಸ್ತಾವಿಕವಾಗಿ ಯಶವಂತ ದೇರಾಜೆ ಮಾತನಾಡಿ ಸುರೇಶ್ ಬಂಗೇರ ಆರ್ಯಾಪು ವಂದನಾರ್ಪನೆ ನೀಡಿದರು

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top