News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈಲು ತಪ್ಪಿದರೂ ವ್ಯಕ್ತಿಯ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಮಹಿಳೆ

ಮಂಗಳೂರು: ಇತ್ತೀಚೆಗಷ್ಟೇ ಬಂಟ್ವಾಳ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದಾಗ ರೈಲಿಗಾಗಿ ಕಾಯುತ್ತಿದ್ದ ಹೇಮಾವತಿ ಎಂಬುವವರು ಅವರನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತನ್ನ ಬೆಂಗಳೂರು ಪ್ರಯಾಣ ತಪ್ಪಿದರೂ ಯೋಚನೆಯೇ ಮಾಡದೆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಅವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ನೆಲ್ಯಾಡಿಯ ಯೂನಿವರ್ಸಿಟಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಹೇಮಾವತಿ ಅವರು ಸೆಪ್ಟೆಂಬರ್ 28 ರಂದು ಬಂಟ್ವಾಳದಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಅವರು ರೈಲು ಹತ್ತಲು ನಿಲ್ದಾಣದಲ್ಲಿ ಕಾಯುತ್ತಿದ್ದರು ಮತ್ತು ಅವರ ಬಳಿ ಎರಡು ಭಾರವಾದ ಬ್ಯಾಗ್‌ಗಳಿದ್ದವು. ಈ ವೇಳೆ ಹಿಂದಿನಿಂದ ಏನೋ ಸದ್ದು ಕೇಳಿಸಿತು. 50ರ ಹರೆಯದ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದರು.

ಈ ಬಗ್ಗೆ ವಿವರಿಸಿರುವ ಹೇಮಾವತಿ, “ನಾನು ಕುಸಿದ ಬಿದ್ದ ವ್ಯಕ್ತಿಗೆ ಸಹಾಯ ಮಾಡಲು ಧಾವಿಸಿದೆ. ಆ ವ್ಯಕ್ತಿ ಬೆವರುತ್ತಿದ್ದರು ಮತ್ತು ಅವರ ದೇಹದ ಉಷ್ಣತೆ ಕಮ್ಮಿಯಾಗುತ್ತಿತ್ತು. ನಾನು ಅವರ ಮುಖವನ್ನು ಒರೆಸಿದೆ ಮತ್ತು ನನಗೆ ಸಹಾಯ ಮಾಡುವಂತೆ ಜನರಿಗೆ ಕೇಳಿದೆ. ಎಲ್ಲರೂ ರೈಲಿನತ್ತ ಧಾವಿಸುವಲ್ಲಿ ನಿರತರಾಗಿದ್ದರು. ಆತನ ಕೈ ಹಿಡಿದಿದ್ದ ಒಬ್ಬ ವ್ಯಕ್ತಿ ಆತ ಸತ್ತಿದ್ದಾನೆ, ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ’ ಎಂದಿದ್ದಾರೆ.

“ಕುಸಿದ ಬಿದ್ದ ವ್ಯಕ್ತಿ ಬದುಕಿದ್ದರು, ಅವರಿಗಾಗಿ ನಾನು ಪ್ರಾರ್ಥಿಸಿದೆ. ನಾನು ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಪ್ರಯತ್ನಿಸಿದೆ. ರೈಲು ಹೊರಟುಹೋದ ನಂತರ, ಸುತ್ತಮುತ್ತ ಯಾರೂ ಇರಲಿಲ್ಲ. ನನಗೆ ಎಲ್ಲಿಂದ ಶಕ್ತಿ ಬಂದಿತೋ ಗೊತ್ತಿಲ್ಲ, ನಾಲ್ಕೂ ಚೀಲಗಳನ್ನು ಎತ್ತಿಕೊಂಡು ಅವರನ್ನು ಹಿಡಿದುಕೊಂಡು ನಿಲ್ದಾಣದ ಹೊರಗೆ ಹೋದೆ. ಆಟೋರಿಕ್ಷಾ ಮಾಡಿಕೊಂಡು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ಹೊರಟೆ. ಕುಸಿದ ಬಿದ್ದ ವ್ಯಕ್ತಿ ತಮ್ಮ ಮಾವ, ವೈದ್ಯರ ಸಂಖ್ಯೆಯನ್ನು ನೀಡಿದರು. ಅವರ ಸಂಬಂಧಿಕರು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿ ಹೆಚ್ಚಿನ ಚಿಕಿತ್ಸೆ ದೊರಕುವಂತೆ ಮಾಡಿದರು. ಅವರು ಬದುಕುವುದಿಲ್ಲ ಎಂದು ಎಲ್ಲರೂ ಹೇಳಿದ್ದರಿಂದ ನನಗೆ ಭಯವಾಗಿತ್ತು” ಎಂದು ಹೇಮಾವತಿ ಹೇಳಿದ್ದಾರೆ.

ರೋಗಿಯು ಗಲ್ಫ್‌ನ ನಿವೃತ್ತ ಉದ್ಯಮಿಯಾಗಿದ್ದು “ಹೇಮಾವತಿ ಅವರು ಇಲ್ಲದಿದ್ದರೆ, ನಾನು ಬದುಕುಳಿಯುತ್ತಿರಲಿಲ್ಲ ಎಂದು  ಹೇಳಿದ್ದಾರೆ. “ಒಮ್ಮೆ ನಾನು ಕುಸಿದು ಬಿದ್ದೆ, ಏನಾಗುತ್ತಿದೆ ಎಂದು ನನಗೆ ತಿಳಿದಿತ್ತು, ಆದರೆ ಮಾತನಾಡಲು ಸಾಧ್ಯವಾಗಲಿಲ್ಲ. ನನ್ನ ಮಾವ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಪದ್ಮನಾಭ ಕಾಮತ್ ಅವರನ್ನು ಸಂಪರ್ಕಿಸಿದರು. ಕೆಎಂಸಿಯಲ್ಲಿ ವೈದ್ಯಕೀಯ ತಂಡವು ನನ್ನನ್ನು ಬದುಕುಳಿಸಿದರು” ಎಂದು ವಿವರಿಸಿದ್ದಾರೆ.

ವಿಧಿ ನಿರ್ಣಯ ಎಂಬಂತೆ ಇಬ್ಬರೂ ಮತ್ತೆ ಭೇಟಿಯಾಗಿದ್ದಾರೆ. ಅಕ್ಟೋಬರ್ 17 ರಂದು, ಹೇಮಾವತಿ ಅವರು ತಮ್ಮ ತಾಯಿಯೊಂದಿಗೆ KMC ಯಲ್ಲಿದ್ದರು, ಅವರು ಡಾ ಕಾಮತ್ ಅವರೊಂದಿಗೆ ಅಪಾಯಿಂಟ್ಮೆಂಟ್ ಹೊಂದಿದ್ದರು. ಡಾ.ಕಾಮತ್ ಅವರನ್ನು ಭೇಟಿ ಮಾಡಲು ಉದ್ಯಮಿ ಕೂಡ ಅಲ್ಲಿಗೆ ಬಂದಿದ್ದರು. ಆಕೆಯನ್ನು ಶೀಘ್ರವಾಗಿ ಗುರುತಿಸಿದರು ಮತ್ತು ವೈದ್ಯರಿಗೆ ಹೇಮಾವತಿ ಮಾಡಿದ ಕಾರ್ಯದ ಬಗ್ಗೆ ವಿವರಿಸಿದರು. ನಂತರ ಹೇಮಾವತಿ ಅವರಿಗೆ ಪ್ರಶಂಸೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿ ಶ್ಲಾಘಿಸಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top