ನವದೆಹಲಿ: ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕ ದಾಳಿಯ ವೇಳೆ ತಡವಾಗಿ ಪ್ರತಿಕ್ರಿಯಿಸಿ ಕುಖ್ಯಾತಿ ಪಡೆದಿರುವ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಇದೀಗ ಹಿಂದೂ ದೇವರಾದ ಶ್ರೀ ಕೃಷ್ಣನ ವಿರುದ್ಧ ಹೇಳಿಕೆ ನೀಡುವ ಮೂಲಕ ವಿವಾದವನ್ನು ಎಬ್ಬಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕಿ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ “ಭಾರತ ರಾಜಕೀಯದಲ್ಲಿ ನನ್ನ ಜೀವನ” ಬಿಡುಗಡೆ ಸಮಾರಂಭದಲ್ಲಿ ಅವರು ಬೇಕಾಬಿಟ್ಟಿ ಮಾತನಾಡಿ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಭಗವದ್ಗೀತೆಯಲ್ಲೂ ಜಿಹಾದ್ ಬಗ್ಗೆ ಹೇಳಲಾಗಿದೆ. ಕೃಷ್ಣ ಅರ್ಜುನನಿಗೆ ಕಲಿಸಿದ್ದು ಜಿಹಾದ್ ಎಂಬ ಹೇಳಿಕೆ ನೀಡಿದ್ದಾರೆ.
“‘ಜಿಹಾದ್’ ಪರಿಕಲ್ಪನೆಯು ಭಗವದ್ಗೀತೆಯ ಒಂದು ಭಾಗವಾಗಿದೆ ಮತ್ತು ಅದನ್ನು ಭಗವಾನ್ ಕೃಷ್ಣನು ಅರ್ಜುನನಿಗೆ ಕಲಿಸಿದನು. ಜಿಹಾದ್ ಎಂದರೆ ಒಬ್ಬ ವ್ಯಕ್ತಿಯನ್ನು ಪಳಗಿಸಲು ಮತ್ತು ಸರಿಯಾದ ಮಾರ್ಗಕ್ಕೆ ತರಲು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಪ್ರಯತ್ನಿಸಿದರೂ ಆತನಲ್ಲಿ ಸ್ವಚ್ಛ ಮತ್ತು ಶಾಂತಿಯುತ ಆಲೋಚನೆಗಳನ್ನು ಸೃಜಿಸಲು ಸಾಧ್ಯವಾಗದಿದ್ದರೆ, ಆಗ ಇತರ ಮಾರ್ಗಗಳನ್ನು ಪ್ರಯತ್ನಿಸುವುದು ಕುರಾನ್ ಮಾತ್ರ ಜಿಹಾದ್ ಬಗ್ಗೆ ಮಾತನಾಡುವುದಿಲ್ಲ, ಮಹಾಭಾರತದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಜಿಹಾದ್ ಪಾಠಗಳನ್ನು ಕಲಿಸಿದನು, ಬೈಬಲ್ನಲ್ಲಿ ಯೇಸು ಕ್ರಿಸ್ತನು ಸಹ ಜಿಹಾದ್ ಬಗ್ಗೆ ಮಾತನಾಡುತ್ತಾನೆ” ಎಂದಿದ್ದಾರೆ.
ಶಿವರಾಜ್ ಪಾಟೀಲ್ ಜಿಹಾದ್ ಪರಿಕಲ್ಪನೆಯನ್ನು ಸಮರ್ಥಿಸಿಕೊಂಡಿದ್ದಾರೆ, “ನಿಮ್ಮ ಕೈಲಾದಷ್ಟು ಪ್ರಯತ್ನಿಸಿದರೂ, ಯಾರಾದರೂ ಶಸ್ತ್ರಾಸ್ತ್ರಗಳೊಂದಿಗೆ ನಿಮ್ಮ ಬಳಿಗೆ ಬಂದರೆ, ನೀವು ಸುಮ್ಮನೆ ಓಡಿಹೋಗಲು ಸಾಧ್ಯವಿಲ್ಲ. ನೀವು ಅದನ್ನು ತಪ್ಪು ಎಂದು ಕರೆಯಲು ಸಾಧ್ಯವಿಲ್ಲ” ಎಂದಿದ್ದಾರೆ
ಪಾಟೀಲ್ ಅವರ ಹೇಳಿಕೆಗೆ ವ್ಯಾಪಕವಾದ ಆಕ್ರೋಶಗಳು ವ್ಯಕ್ತವಾಗಿದೆ.
ಮುಂಬೈ ದಾಳಿಯ ಸಂದರ್ಭದಲ್ಲಿ ತಡವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಪಾಟೀಲ್ ಅವರನ್ನು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಮುಂಬೈ ದಾಳಿಯ ಸ್ಥಳಗಳಲ್ಲಿ ಎನ್ಎಸ್ಜಿ ನಿಯೋಜನೆ ವಿಳಂಬವಾಗುವುದಕ್ಕೆ ಇವರೇ ಕಾರಣ ಎಂಬ ಗಂಭೀರ ಆರೋಪ ಇವರ ಮೇಲಿದೆ.
ಪಶ್ಚಿಮ ಬಂಗಾಳ ಸರ್ಕಾರವು ಪದೇ ಪದೇ ಮನವಿ ಮಾಡಿದ ನಂತರವೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅನ್ನು ನಂದಿಗ್ರಾಮಕ್ಕೆ ಕಳುಹಿಸಲಿಲ್ಲ ಎಂಬ ಆರೋಪವೂ ಅವರ ಮೇಲಿತ್ತು.
Meet Shivraj Patil, ex-home minister from @INCIndia. His chief claim to fame is that he changed clothes five times while Mumbai was being attacked by Islamic terrorists on 26/11. Now he says Shri Krishna taught Arjuna ‘Jihad’. Yes, you heard it right. pic.twitter.com/MRrP7tVp3H
— Shefali Vaidya. 🇮🇳 (@ShefVaidya) October 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.