ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಪಟಾಕಿ ಪ್ರಿಯರು ಪಟಾಕಿ ಹೊಡೆಯಲು ಉತ್ಸಾಹಭರಿತರಾಗಿದ್ದಾರೆ. ಆದರೆ ಪರಿಸರ ಮಾಲಿನ್ಯದ ಕಾರಣದಿಂದ ಸರ್ಕಾರ ವಿಧಿಸಿರುವ ನಿರ್ಬಂಧಗಳು ಅವರಿಗೆ ನಿರಾಸೆ ಮೂಡಿಸಿದೆ.
ಆದರೆ ಮಂಗಳೂರಿನ ಪೇಪರ್ ಸೀಡ್ ಕಂಪನಿಯು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನುಂಟು ಮಾಡದ ಮತ್ತು ಹೊಗೆ ರಹಿತ, ಶಬ್ದ ರಹಿತ ಪಟಾಕಿಗಳನ್ನು ತಯಾರಿಸಿದೆ. ಪಟಾಕಿ ಪ್ರಿಯರು ಈ ತರಹೇವಾರಿ ಪಟಾಕಿಗಳನ್ನು ಕೊಂಡು ಬಂದು ತಮ್ಮ ಮನೆಗಳಲ್ಲಿ ಗಿಡಗಳನ್ನು ಬೆಳೆಸಬಹುದು.
ಪಕ್ಷಿಕೆರೆಯಲ್ಲಿರುವ ನಿತಿನ್ ವಾಸ್ ಎಂಬುವವರ ಪೇಪರ್ ಸೀಡ್ಸ್ ಸಂಸ್ಥೆಯಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಪಟಾಕಿಗಳು ತಯಾರುಗೊಂಡಿವೆ. ಪಟಾಕಿಗಳಂತೆ ಕಾಣುವ ಇವುಗಳು ಸಿಡಿಯುವುದಿಲ್ಲ. ಈ ಸಿಡಿಯದ ಪಟಾಕಿಗಳನ್ನು ನೈಜ ಪಟಾಕಿಗಳ ರೀತಿಯಲ್ಲಿ ತಯಾರಿಸಲಾಗಿದೆ. ಅದರ ಬಣ್ಣ, ಗಾತ್ರ ಇವುಗಳೆಲ್ಲ ನಿಜವಾದ ಪಟಾಕಿ ರೀತಿಯಲ್ಲಿ ಇದೆ.
ಈ ಪಟಾಕಿಗಳನ್ನು ತೊಟ್ಟಿ, ಹೂ ಕುಂಡಗಳಿಗೆ ಹಾಕಿದರೆ ಅವು ಗಿಡವಾಗಿ ಬೆಳೆಯುತ್ತವೆ. ವಿವಿಧ ತರಕಾರಿ ಬೀಜಗಳನ್ನು ಇದರೊಳಗೆ ಹಾಕಲಾಗಿದೆ. ಈ ಪಟಾಕಿಗಳ ಒಳಗಡೆ ಹಾಕಿರುವ ಬೀಜಗಳು ಮಣ್ಣಿಗೆ ಬಿದ್ದು, ಅದಕ್ಕೆ ನೀರು ಹಾಕಿದರೆ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ.
कर्नाटक: मंगलुरु में पेपर सीड कंपनी ने पर्यावरण के अनुकूल पटाखे बनाए हैं जो धुआं या ध्वनि नहीं करते हैं। (19.10) pic.twitter.com/7yd5IbDk7C
— ANI_HindiNews (@AHindinews) October 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.