ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದ ಆವರಣದಲ್ಲಿ ‘ಶ್ರೀ ಮಹಾಕಾಲ ಲೋಕ’ ಕಾರಿಡಾರ್ನ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಸಾಂಪ್ರದಾಯಿಕ ಧೋತಿ ಮತ್ತು ಶಾಲು ಧರಿಸಿ ದೇಗುಲ ಪ್ರವೇಶಿಸಿ ಮಹಾಕಾಲನಿಗೆ ಪೂಜೆ ಸಲ್ಲಿಸಿದರು. ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಸಾಥ್ ನೀಡಿದರು.
ॐ तत्पुरुषाय विद्महे, महादेवाय धीमहि, तन्नो रूद्र: प्रचोदयात्।।#ShriMahakalLok pic.twitter.com/ycMbKRZQoD
— BJP (@BJP4India) October 11, 2022
ಮಹಾಕಾಳೇಶ್ವರ ದೇಗುಲದ ಮೊದಲ ಹಂತದ ಅಭಿವೃದ್ಧಿ ಯೋಜನೆ ಇದಾಗಿದ್ದು, ಇದರ ವಿಹಂಗಮ ನೋಟಕ್ಕೆ ಜನರು ಮನಸೋತಿದ್ದಾರೆ. ಇನ್ನು ಮುಂದೆ ಉಜ್ಜೈನಿಗೆ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಮಹಾಕಾಲ್ ಲೋಕ ಯೋಜನೆಯ ಮೊದಲ ಹಂತವು ವಿಶ್ವ ದರ್ಜೆಯ ಆಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಭವವನ್ನು ಶ್ರೀಮಂತಗೊಳಿಸಲು ಸಹಾಯ ಮಾಡುತ್ತದೆ.
ಯೋಜನೆಯು ಸಂಪೂರ್ಣ ಪ್ರದೇಶದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲಿದೆ ಮತ್ತು ಪಾರಂಪರಿಕ ರಚನೆಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಗೆ ವಿಶೇಷ ಒತ್ತು ನೀಡಿದೆ. ಯೋಜನೆಯಡಿಯಲ್ಲಿ, ದೇವಾಲಯದ ಆವರಣವನ್ನು ಸುಮಾರು ಏಳು ಪಟ್ಟು ವಿಸ್ತರಿಸಲಾಗುತ್ತದೆ. ಇಡೀ ಯೋಜನೆಯ ಒಟ್ಟು ವೆಚ್ಚ ಸುಮಾರು 850 ಕೋಟಿ ರೂ ಆಗಿದೆ.
प्रधानमंत्री श्री @narendramodi ने उज्जैन, मध्य प्रदेश में श्री महाकाल लोक का अनावरण किया।#ShriMahakalLok pic.twitter.com/MKLkd18k1e
— BJP (@BJP4India) October 11, 2022
ಕಾಶಿ ವಿಶ್ವನಾಥದ ಬಳಿಕ ಮೋದಿ ಲೋಕಾರ್ಪಣೆ ಮಾಡಿದ ಎರಡನೇ ದೇಗುಲ ಕಾರಿಡಾರ್ ಇದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂ ಸಾಂಸ್ಕೃತಿಕ ಪುನರುತ್ಥಾನವನ್ನು ಮಾಡುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದು ಹಿಂದೂ ಸಾಂಸ್ಕೃತಿಕತೆಯ ಪುನರುತ್ಥಾನ ಎಂದೆ ವಿಶ್ಲೇಷಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.