News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್‌ಎಸ್‌ಎಸ್‌ ಬಗ್ಗೆ ಸುಳ್ಳು ಲೇಖನ: ಕ್ಷಮೆಯಾಚಿಸಿದ ಮಾತೃಭೂಮಿ

ಕೋಝಿಕೋಡ್: ಆರ್‌ಎಸ್ಎಸ್ ವಿರುದ್ಧ ಸುಳ್ಳು ಮಾಹಿತಿಯನ್ನು ಪ್ರಕಟ ಮಾಡಿದ್ದಕ್ಕಾಗಿ ಮಾತೃಭೂಮಿ ಸಾಪ್ತಾಹಿಕ ಕ್ಷಮೆಯಾಚನೆ ಮಾಡಿದೆ. ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಸೋತ ಬಳಿಕ ಈ ಬೆಳವಣಿಗೆ ನಡೆದಿದೆ. ಮಾತೃಭೂಮಿ ಸಾಪ್ತಾಹಿಕದಲ್ಲಿ ಆರ್‌ಎಸ್‌ಎಸ್‌ ಬಗ್ಗೆ ತಪ್ಪಾದ ಮಾಹಿತಿ ಪ್ರಕಟಿಸಿದ್ದಕ್ಕಾಗಿ ಕ್ಷಮೆಯಾಚನೆ ಮಾಡಿದೆ.

ಮಾತೃಭೂಮಿ ಮುಖಪುಟದಲ್ಲಿ ಪ್ರಕಟಿಸಲಾಗಿದ್ದ ‘ಭೀಕರತುದೆ ವೈರಸ್'(ವೈರಸ್ ಆಫ್ ಟೆರರಿಸಂ) ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಲಾಗಿದೆ.

2011ರ ಫೆಬ್ರವರಿ 27ರಿಂದ ಮಾರ್ಚ್ ವರೆಗೆ “ಆರ್‌ಎಸ್‌ಎಸ್ ಭಯೋತ್ಪಾದನೆ ಭಾರತವನ್ನು ನುಂಗಿ ಬಿಡುತ್ತಾರೆಯೇ?” ಎಂಬ ಐದು ಲೇಖನಗಳ ಸರಣಿಯನ್ನು ಪ್ರಕಟಿಸಲಾಗಿತ್ತು. ಬದ್ರಿ ರೈನಾ ಎಂಬುವವರು ಇದನ್ನು ಬರೆದಿದ್ದರು. ಸಂಶೋಧನೆಗಳನ್ನು ಆಧರಿಸಿ ಲೇಖನ ಬರೆದಿರುವುದಾಗಿ ಅವರು ಹೇಳಿಕೊಂಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್‌ ಕಾನೂನು ಹೋರಾಟ ಆರಂಭಿಸಿತ್ತು. ಗೋಪಾಲನ್ ಕುಟ್ಟಿ ಮಾಸ್ಟರ್ ಎಂಬುವವರು ಎರ್ನಾಕುಲಂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬಳಿಕ ಕಾನೂನು ಪ್ರಕ್ರಿಯೆಗಳು ನಡೆದು ಹೈಕೋರ್ಟ್‌ನಲ್ಲೂ ಆರ್‌ಎಸ್‌ಎಸ್‌ ಪರವಾದ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಮಾತೃಭೂಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲೂ ಆರ್‌ಎಸ್‌ಎಸ್‌ ಪರ ತೀರ್ಪು ಬಂದಿತ್ತು.

ಈ ಬೆಳವಣಿಗೆ ಬಳಿಕ ಮಾತೃಭೂಮಿ ಆರ್‌ಎಸ್‌ಎಸ್‌ ಬಗೆಗಿನ ತನ್ನ ಲೇಖನ ತಪ್ಪಿನಿಂದ ಕೂಡಿತ್ತು ಎಂದು ವಿಷಾದ ವ್ಯಕ್ತಪಡಿಸಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top