ನವದೆಹಲಿ: ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಭಾರತದಲ್ಲಿ ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್ಗಳಾದ ʼಪ್ರಚಂಡ್ʼ ಅನ್ನು ಇಂದು ವಾಯುಪಡೆಗೆ ಸೇರ್ಪಡೆಗೊಳಿಸಿದರು
ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಈ ಲಘು ಯುದ್ಧ ಹೆಲಿಕಾಪ್ಟರ್ಗಳ (LCH) 1 ನೇ ಬ್ಯಾಚ್ ಅನ್ನು ಸೇರ್ಪಡೆಗೊಳಿಸಿದರು.
ಕೇಂದ್ರದ ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ ಪ್ರಮುಖ ಉತ್ತೇಜನ ನೀಡುವಂತೆ ಈ ಹೆಲಿಕಾಫ್ಟರ್ಗಳನ್ನು ಸಂಪೂರ್ಣವಾಗಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾಗಿದೆ.
“ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ಸಮಾರಂಭದಲ್ಲಿ, ಸ್ವದೇಶಿಯಾಗ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ಗಳ (LCH) ಮೊದಲ ಬ್ಯಾಚ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಪಡೆಯ (IAF) ದಾಸ್ತಾನು ಪಟ್ಟಿಗೆ ಸೇರಿಸಿದರು. IAF ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಹೊಸದಾಗಿ ನೇಮಕಗೊಂಡ CDS ಜನರಲ್ ಅನಿಲ್ ಚೌಹಾಣ್ ಅವರ ಸಮ್ಮುಖದಲ್ಲಿ ಸೇರ್ಪಡೆ ಸಮಾರಂಭದಲ್ಲಿ ‘ಸರ್ವ ಧರ್ಮ’ ಪ್ರಾರ್ಥನೆಯನ್ನು ಸಹ ಮಾಡಲಾಯಿತು” ಎಂದು ವರದಿಗಳು ತಿಳಿಸಿವೆ.
ಈ ಹೆಲಿಕಾಪ್ಟರ್ಗಳ ಸೇರ್ಪಡೆ ಐಎಎಫ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ವೈಮಾನಿಕ ಯುದ್ಧದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸಂಘರ್ಷಗಳ ಸಮಯದಲ್ಲಿ ನಿಧಾನವಾಗಿ ಚಲಿಸುವ ವಿಮಾನಗಳು, ಡ್ರೋನ್ಗಳು ಮತ್ತು ಶಸ್ತ್ರಸಜ್ಜಿತ ಕಾಲಮ್ಗಳನ್ನು ಎದುರಿಸಲು ವಾಯುಸೇನೆಗೆ ಸಹಾಯ ಮಾಡುತ್ತದೆ.
Jodhpur, Rajasthan | Recent Ukrainian conflict or earlier conflicts teach us that heavy weapon systems and platforms, which are unable to move rapidly across the battlefield, have low capability, and become easy targets for the enemy: Defence Minister Rajnath Singh pic.twitter.com/E5FLfD8KmR
— ANI (@ANI) October 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.