News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಸ್ವೀಕಾರಾರ್ಹವಲ್ಲದ ಕಾರಣ ಪುಟಿನ್‌ ಪರಮಾಣು ಶಸ್ತ್ರಾಸ್ತ್ರ ಬಳಸಲಾರರು: ಯುಕೆ ವಕ್ತಾರ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದು ಅಸಂಭವ. ಏಕೆಂದರೆ ಅದು ಮಾಸ್ಕೋದ ಮಿತ್ರರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ಸ್ವೀಕಾರಾರ್ಹವಲ್ಲ ಎಂದು ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಭಾನುವಾರ ಹೇಳಿದ್ದಾರೆ.

ಆದರೆ, ರಷ್ಯಾದ ಒಕ್ಕೂಟದ ಮುಖ್ಯಸ್ಥ ಪುಟಟಿನ್ “ತರ್ಕಬದ್ಧ” ರೀತಿಯಲ್ಲಿ ವರ್ತಿಸುತ್ತಿಲ್ಲ ಮತ್ತು ಅವರ ಧೋರಣೆಯಿಂದ ಪರಿಸ್ಥಿತಿಯು ಹದಗೆಡುವ ಸಾಧ್ಯತೆಗಳು ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ.

ಪುಟಿನ್ ರಷ್ಯಾ ದೂರದರ್ಶನದ ಭಾಷಣದಲ್ಲಿ, ರಷ್ಯಾದ ಒಕ್ಕೂಟವನ್ನು ರಕ್ಷಿಸಲು ನಮ್ಮ ಸಾಮರ್ಥ್ಯದಲ್ಲಿರುವ ಎಲ್ಲಾ ವಿಧಾನಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದರು. ಮಾಸ್ಕೋ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಉಕ್ರೇನ್‌ನ ನಾಲ್ಕು ಪ್ರಾಂತ್ಯಗಳ ಮೇಲಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅವರು ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂಬ ಸೂಚನೆಯನ್ನು ಈ  ಭಾಷಣವು ರವಾನಿಸಿತ್ತು.

ಆದರೆ ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ರಷ್ಯಾ ಪರಮಾಣು ಬಳಸುವುದು ಅಸಂಭವ, ಯಾಕೆಂದರೆ ಅದನ್ನು ಭಾರತ ಮತ್ತು ಚೀನಾ ಒಪ್ಪಲಾರದು ಎಂದಿದ್ದಾರೆ.

2022 SCO ಶೃಂಗಸಭೆಯ ವೇಳೆ ಭಾರತ ಮತ್ತು ಚೀನೀ ನಾಯಕತ್ವದೊಂದಿಗಿನ ಪುಟಿನ್‌ ನಡೆಸಿದ ಸಭೆಗಳ ಸಮಯದಲ್ಲಿ  ಅವರಿಗೆ ಯಾವುದು ಸ್ವೀಕಾರಾರ್ಹ ಮತ್ತು ಸ್ವೀಕಾರಾರ್ಹವಲ್ಲ ಎಂಬುದರ ಕುರಿತು ಸ್ಪಷ್ಟವಾದ ಅರ್ಥವನ್ನು ಎರಡೂ ದೇಶಗಳು ನೀಡಿವೆ ಎಂದು ವ್ಯಾಲೇಸ್ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top