ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಸೂಫಿ ಇಸ್ಲಾಮಿಕ್ ಬೋರ್ಡ್ ಸ್ವಾಗತಿಸಿದೆ.
ಪಿಎಫ್ಐ ಇಸ್ಲಾಂ ಧರ್ಮವನ್ನು ಅವಮಾನಕ್ಕೀಡು ಮಾಡಿದೆ, ಇಸ್ಲಾಂ ಬೋಧನೆಗಳನ್ನು ಧಿಕ್ಕರಿಸಿದೆ ಮತ್ತು ದೇಶದ ಮುಸ್ಲಿಂ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡಿದೆ ಎಂದು ಹೇಳಿದೆ.
ಪಿಎಫ್ಐ ಮೇಲಿನ ನಿಷೇಧವನ್ನು ಸಮುದಾಯದ ವಿಜಯ ಎಂದು ಕರೆದಿರುವ ಮಂಡಳಿಯ ರಾಷ್ಟ್ರೀಯ ವಕ್ತಾರ ಕಾಶಿಶ್ ವಾಸಿ, ಪಿಎಫ್ಐ ದೇಶದ ವಿರುದ್ಧ ‘ಜಿಹಾದ್’ ಪದವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
“ಭಾರತ ಸರ್ಕಾರವು PFI ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ನಮಗೆ ಸಂತೋಷವಾಗಿದೆ. ಸಂಘಟನೆಯು ಇಸ್ಲಾಮಿನ ವಿರುದ್ಧವಾಗಿತ್ತು. ಅವರು ಭಾರತದ ವಿರುದ್ಧ ಜಿಹಾದ್ ಅನ್ನು ದುರುಪಯೋಗಪಡಿಸಿಕೊಂಡರು ಮತ್ತು ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಮತ್ತು ನನ್ನ ಸಂಘಟನೆಯು ಹಲವಾರು ವರ್ಷಗಳಿಂದ ಈ ಸಂಘಟನೆಯ ವಿರುದ್ಧ ಹೋರಾಡುತ್ತಿದ್ದೆವು. ನಾವು ಕೂಡ ಪಿಎಫ್ಐ ಬಗ್ಗೆ ಎಚ್ಚರವಿರುವಂತೆ ಸಮುದಾಯಕ್ಕೆ ಸಲಹೆ ನೀಡುವ ಕರಪತ್ರಗಳನ್ನು ಬಿಡುಗಡೆ ಮಾಡಿದ್ದೇವೆ. ಇಸ್ಲಾಂ ಧರ್ಮವನ್ನು ಅವಮಾನಿಸುವ ಮತ್ತು ಯುವಕರನ್ನು ತೀವ್ರಗಾಮಿಗೊಳಿಸುವ ಪ್ರತಿಯೊಂದು ಸಂಘಟನೆಯ ವಿರುದ್ಧ ನಾವು ಹೋರಾಟವನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.