ನವದೆಹಲಿ: ದೇಶವು ಇಂದು ಸರ್ಜಿಕಲ್ ಸ್ಟ್ರೈಕ್ನ ಆರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2016 ರಲ್ಲಿ ಇದೇ ದಿನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.
18 ಸೈನಿಕರ ಪ್ರಾಣ ಕಳೆದುಕೊಂಡ ಉರಿ ದಾಳಿಯ ಹನ್ನೊಂದು ದಿನಗಳ ನಂತರ, ಭಾರತೀಯ ಸೇನೆಯು 2016 ರ ಸೆಪ್ಟೆಂಬರ್ 28 ಮತ್ತು 29ರ ರಾತ್ರಿ ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿತ್ತು. ಈ ಸರ್ಜಿಕಲ್ ಸ್ಟ್ರೈಕ್ ಭಯೋತ್ಪಾದಕರಿಗೆ ಭಾರೀ ಸಾವುನೋವುಗಳನ್ನು ಉಂಟುಮಾಡಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ವಿವಿಧ ವಿವಿಧ ತುಕಡಿಗಳ ಕಮಾಂಡೋಗಳನ್ನು ಒಳಗೊಂಡಂತೆ ಭಾರತೀಯ ಸೇನೆಯು ಅನೇಕ ಉಗ್ರರ ಶಿಬಿರಗಳ ಮೇಲೆ ಗಡಿಯಾದ್ಯಂತ ದಾಳಿ ನಡೆಸಿತು. ಈ ಎಲ್ಲಾ ಶಿಬಿರಗಳು ಸೇನಾ ಮತ್ತು ನಾಗರಿಕ ವಿರುದ್ಧ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರ ಲಾಂಚ್ ಪ್ಯಾಡ್ಗಳಾಗಿದ್ದವು.
ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತವು, ಅಗತ್ಯಬಿದ್ದರೆ ಗಡಿಯನ್ನೂ ದಾಟಿ ಭಯೋತ್ಪಾದನಾ ಲಾಂಚ್ಪ್ಯಾಡ್ ಮೇಲೆ ದಾಳಿ ಮಾಡಬಲ್ಲೆವು ಎಂಬ ಸೂಕ್ತ ಸಂದೇಶವನ್ನು ನೆರೆಯ ಪಾಕಿಸ್ಥಾನಕ್ಕೆ ನೀಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.