ತಿರುವನಂತಪುರಂ: ಕೇರಳ ರಾಜ್ಯವು ಭಯೋತ್ಪಾದನೆ ಮತ್ತು ಉಗ್ರರ ತಾಣವಾಗಿದೆ ಮತ್ತುಅಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕೇರಳದ ಥೈಕಾಡಿನಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಜೆಪಿ ನಡ್ಡಾ ಅವರು, ಕೇರಳದ ಸಿಪಿಐ-ಎಂ ನೇತೃತ್ವದ ಎಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು,
“ಕೇರಳ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ, ರಾಜ್ಯದ ಸಿಎಂ ಕಚೇರಿಯೇ ಭ್ರಷ್ಟಾಚಾರಕ್ಕೆ ಒಳಗಾಗಿದೆ ಎಂದರೆ ಸಂಪೂರ್ಣ ಆಡಳಿತಕ್ಕೆ ಬೇರೆ ದುರಾದೃಷ್ಟ ಬೇಕೇ?. ಎಲ್ಡಿಎಫ್ ಸರ್ಕಾರವು ಕೇರಳ ರಾಜ್ಯವನ್ನು ಹಾಳುಮಾಡುತ್ತಿದೆ ಮತ್ತು ನಾಶಪಡಿಸುತ್ತಿದೆ” ಎಂದಿದ್ದಾರೆ.
“ಕೇರಳವು ಭಯೋತ್ಪಾದನೆ ಮತ್ತು ಮೂಲಭೂತವಾದಿ ಅಂಶಗಳ ತಾಣವಾಗುತ್ತಿದೆ, ಇಲ್ಲಿ ಜೀವನವು ಸುರಕ್ಷಿತವಾಗಿಲ್ಲ ಮತ್ತು ಸಾಮಾನ್ಯ ನಾಗರಿಕರೂ ಸುರಕ್ಷಿತವಾಗಿರುವುದಿಲ್ಲ. ಎಡ ಸರ್ಕಾರವು ಅಪರಾಧಿಗಳಿಗೆ ಮೌನ ಬೆಂಬಲ ನೀಡುತ್ತಿದೆ ಮತ್ತು ಇದು ರಾಜ್ಯ ಪ್ರಾಯೋಜಿತವಾಗಿದೆ” ಎಂದಿದ್ದಾರೆ.
“ಬಿಜೆಪಿಯು ರಚನಾತ್ಮಕ, ಕೇಡರ್ ಆಧಾರಿತ ಪಕ್ಷವಾಗಿದ್ದು, ತನ್ನ ಸಿದ್ಧಾಂತಕ್ಕೆ ಸ್ಥಿರವಾಗಿದೆ ಮತ್ತು ಅಪಾರ ಅನುಯಾಯಿಗಳನ್ನು ಹೊಂದಿದೆ, ಸಮಾಜದ ಪ್ರತಿಯೊಂದು ವರ್ಗವನ್ನು ಮೇಲಕ್ಕೆತ್ತಲು ಪ್ರಧಾನಿ ಮೋದಿ ಶತ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. 1950 ರಲ್ಲಿ ಜನಸಂಘದೊಂದಿಗೆ ಪ್ರಾರಂಭವಾದ ಸಿದ್ಧಾಂತವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಭಾಗವಾಗಲು ನಾವೆಲ್ಲ ಅದೃಷ್ಟವಂತರು. ನಮ್ಮ ಸಿದ್ಧಾಂತದ ಅನುಷ್ಠಾನ ಏನೆಂಬುದು 370 ನೇ ವಿಧಿಯ ರದ್ಧತಿಯ ನಮ್ಮ ನಿಲುವಿನಿಂದ ಪ್ರತಿಫಲಿಸುತ್ತದೆ. ನಾವು ರಾಷ್ಟ್ರೀಯ ಬದ್ಧತೆಗಳಿಗೆ ಬದ್ಧರಾಗಿದ್ದೇವೆ ಮತ್ತು ಪ್ರಾದೇಶಿಕ ಜನರ ಆಕಾಂಕ್ಷೆಗಳನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ನಾವು ಕೇವಲ ರಾಜಕೀಯ ಪಕ್ಷವಲ್ಲ, ಮಾನವೀಯತೆ ಮತ್ತು ಸಮಾಜ ಸೇವೆಯ ತತ್ವಗಳ ಮೇಲೆ ಬದುಕುವ ಪಕ್ಷ” ಎಂದು ನಡ್ಡಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.