ರಾಂಚಿ: ಜಾರ್ಖಂಡ್ನ ಬುದ್ಧ ಪಹಾಡ್ನಿಂದ ಮಾವೋವಾದಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಇದೊಂದು ‘ಐತಿಹಾಸಿಕ ಮೈಲಿಗಲ್ಲು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಜಾರ್ಖಂಡ್ನ ಲತೇಹಾರ್ ಜಿಲ್ಲೆಯಲ್ಲಿರುವ ಬುದ್ಧ ಪಹಾಡ್ ಅನ್ನು ಜಂಟಿ ಪಡೆಗಳು ನಕ್ಸಲ್ ಮುಕ್ತಗೊಳಿಸುವಲ್ಲಿ ಯಶಸ್ವಿಯಾದವು. ಬುದ್ಧ ಪಹಾಡ್ ಸುಮಾರು 55 ಚದರ ಕಿಲೋಮೀಟರ್ನಲ್ಲಿ ಹರಡಿಕೊಂಡಿದ್ದು, ಒಂದು ಕಡೆ ಛತ್ತೀಸ್ಗಢದೊಂದಿಗೆ ಸಂಪರ್ಕ ಹೊಂದಿದೆ. ಇದು ಬಿಹಾರ, ಜಾರ್ಖಂಡ್, ಛತ್ತೀಸ್ಗಢ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಉನ್ನತ ನಕ್ಸಲ್ ಕಮಾಂಡರ್ಗಳಿಗೆ ಆಶ್ರಯ ನೀಡುವ ಮೂಲಕ ಕುಖ್ಯಾತಿ ಗಳಿಸಿತ್ತು.
ಜಾರ್ಖಂಡ್ನ ಬುದ್ಧ ಪಹಾಡ್ ಅನ್ನು ನಕ್ಸಲರಿಂದ ಮುಕ್ತಗೊಳಿಸಿದ ಸರ್ಕಾರಿ ಪಡೆಗಳನ್ನು ಅಮಿತ್ ಶಾ ಅಭಿನಂದಿಸಿದ್ದಾರೆ. ಸುಮಾರು ಮೂರು ದಶಕಗಳ ಮಾವೋವಾದಿಗಳ ಪ್ರಾಬಲ್ಯದ ನಂತರ ಈ ನಕ್ಸಲ್ ಅಡಗುತಾಣವನ್ನು ಮುಕ್ತಗೊಳಿಸಲಾಗಿದೆ, ಮಾವೋವಾದಿ ಪ್ರಾಬಲ್ಯದ ಪ್ರದೇಶವನ್ನು ಬುಧವಾರ ಆಪರೇಷನ್ `ಆಕ್ಟೋಪಸ್’ ಅಡಿಯಲ್ಲಿ ಮುಕ್ತಗೊಳಿಸಲಾಗಿದೆ.
ಜಾರ್ಖಂಡ್ ಪೊಲೀಸರು, ಛತ್ತೀಸ್ಗಢ ಪೊಲೀಸರು, ತೆಲಂಗಾಣ ಪೊಲೀಸರು, ಸಿಆರ್ಪಿಎಫ್ ಕೋಬ್ರಾ ಬೆಟಾಲಿಯನ್, ಜಾಗ್ವಾರ್ ದಾಳಿ ಘಟಕ ಮತ್ತು ಐಆರ್ಬಿ ಕಾರ್ಯಾಚರಣೆಯ `ಆಕ್ಟೋಪಸ್’ ಅಡಿಯಲ್ಲಿ ಮಾವೋವಾದಿ ಪ್ರಾಬಲ್ಯದ ಪ್ರದೇಶವನ್ನು ನಕ್ಸಲ್ ಮುಕ್ತಗೊಳಿಸಲಾಗಿದೆ.
देश की आंतरिक सुरक्षा में एक ऐतिहासिक पड़ाव पार हुआ है।
पीएम @narendramodi जी के नेतृत्व में देशभर में वामपंथी उग्रवाद के विरुद्ध चल रही निर्णायक लड़ाई में सुरक्षाबलों ने अभूतपूर्व सफलता प्राप्त की है।
इसके लिए @crpfindia, सुरक्षा एजेंसियों व राज्य पुलिसबलों को बधाई देता हूँ।
— Amit Shah (@AmitShah) September 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.