ಕಠ್ಮಂಡು: ನೇಪಾಳ ಪ್ರವಾಸದಲ್ಲಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಅಲ್ಲಿನ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಭೇಟಿ ಮಾಡಿದರು. ಜನರಲ್ ಮನೋಜ್ ಪಾಂಡೆ ಅವರೊಂದಿಗೆ ರಾಯಭಾರಿ ನವೀನ್ ಶ್ರೀವಾಸ್ತವ ಮತ್ತು ಇತರ ನಿಯೋಗ ಸದಸ್ಯರು ಇದ್ದರು ಎಂದು ಮೂಲಗಳು ತಿಳಿಸಿವೆ.
ನೇಪಾಳ ಸರ್ಕಾರ ನೀಡಿದ ಆತ್ಮೀಯ ಆತಿಥ್ಯಕ್ಕೆ ಮನೋಜ್ ಪಾಂಡೆ ಕೃತಜ್ಞತೆ ಸಲ್ಲಿಸಿದರು. ಭಾರತ ಮತ್ತು ನೇಪಾಳ ನಡುವಿನ ವ್ಯಾಪಕ ದ್ವಿಪಕ್ಷೀಯ ಪಾಲುದಾರಿಕೆಯ ಬಗ್ಗೆ ಎರಡೂ ಕಡೆಯವರು ಚರ್ಚೆಯ ಸಮಯದಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ತಾವು ಕೆಲಸ ಮಾಡುವುದಾಗಿ ಭಾರತೀಯ ಸೇನಾ ಮುಖ್ಯಸ್ಥರು ಪುನರುಚ್ಚರಿಸಿದ್ದಾರೆ.
ಭಾರತ ಸರ್ಕಾರದ ಪರವಾಗಿ, ಭಾರತೀಯ ಸೇನಾ ಮುಖ್ಯಸ್ಥರು ನೇಪಾಳಿ ಸೇನೆಗೆ ತರಬೇತಿ ಸಲಕರಣೆಗಳನ್ನು ಹಸ್ತಾಂತರ ಮಾಡಿದ್ದಾರೆ. ಜೊತೆಗೆ ನೇಪಾಳಿ ಸೇನಾ ಸಿಬ್ಬಂದಿಯ ಸಾಮರ್ಥ್ಯವನ್ನು ಹೆಚ್ಚಿಸುವ ಲಘು ವಾಹನಗಳನ್ನು ನೀಡಿದ್ದಾರೆ.
ನೇಪಾಳಿ ಸೇನೆಯ ಸೇನಾ ಮುಖ್ಯಸ್ಥ ಜನರಲ್ ಪ್ರಭು ರಾಮ್ ಶರ್ಮಾ ಅವರ ಆಹ್ವಾನದ ಮೇರೆಗೆ ಜನರಲ್ ಮನೋಜ್ ಪಾಂಡೆ ನೇಪಾಳಕ್ಕೆ ಐದು ದಿನಗಳ ಅಧಿಕೃತ ಭೇಟಿಗಾಗಿ ಸೆಪ್ಟೆಂಬರ್ 4 ರಂದು ಕಠ್ಮಂಡುವಿಗೆ ಆಗಮಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.