ನವದೆಹಲಿ: ಕಾರು ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವು ಕಾರು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಸ್ತೆ ಅಪಘಾತಗಳನ್ನು ತಡೆಯುವ ಯಾವುದೇ ಪ್ರಯತ್ನವು ಜನರ ಸಹಕಾರವಿಲ್ಲದೆ ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದಾರೆ.
ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ 54 ವರ್ಷದ ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಅತಿವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮಿಸ್ತ್ರಿ ಅವರು ಹಿಂದಿನ ಸೀಟಿನಲ್ಲಿದ್ದರು ಮತ್ತು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಿಂಬದಿ ಸೀಟಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಜಹಾಂಗೀರ್ ಪಾಂಡೋಲೆ ಕೂಡ ಸಾವನ್ನಪ್ಪಿದ್ದಾರೆ.
“ಹಿಂದೆ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸುವ ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ. ಯಾವುದೇ ಅಪಘಾತದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಹಿಂಭಾಗದಲ್ಲಿರುವ ಜನರು ಮುಂಭಾಗದ ಸೀಟಿನವರು ಮಾತ್ರ ಬೆಲ್ಟ್ ಧರಿಸಬೇಕೆಂದು ಭಾವಿಸುತ್ತಾರೆ. ಮುಂಭಾಗದ ಆಸನಗಳು ಮತ್ತು ಹಿಂಬದಿ ಆಸನದಲ್ಲಿ ಕುಳಿತವರು ಎಲ್ಲರಿಗೂ ಸೀಟ್ ಬೆಲ್ಟ್ ಅಗತ್ಯವಿದೆ” ಎಂದು ಗಡ್ಕರಿ ಜಾಗತಿಕ ಶೃಂಗಸಭೆಯಲ್ಲಿ ಹೇಳಿದ್ದಾರೆ.
“ಜನಸಾಮಾನ್ಯರನ್ನು ಮರೆತುಬಿಡಿ, ನಾನು ನಾಲ್ಕು ಮುಖ್ಯಮಂತ್ರಿಗಳ ಕಾರಿನಲ್ಲಿ ಪ್ರಯಾಣಿಸಿದ್ದೇನೆ, ಅವರ ಹೆಸರನ್ನು ಕೇಳಬೇಡಿ, ನಾನು ಮುಂದಿನ ಸೀಟಿನಲ್ಲಿದ್ದೆ, ಬೆಲ್ಟ್ ಧರಿಸದಿದ್ದರೆ ಕಾರು ಅಲಾರಾಂ ಹಾಕುತ್ತದೆ. ಆದರೆ ಚಾಲಕರು ಕ್ಲಿಪ್ ಹಾಕಿ ಅಲಾರಾಂ ಬಂದ್ ಮಾಡಿ ಹಾಕಿದ್ದರು. ಈ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಗಡ್ಕರಿ ಹೇಳಿದ್ದಾರೆ.
ತಮ್ಮ ಸಚಿವಾಲಯವು ಕಾರುಗಳಿಗೆ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸುವ ಪ್ರಯತ್ನದಲ್ಲಿದೆ ಎಂದು ಅವರು ಹೇಳಿದರು.
ಆರು ಏರ್ಬ್ಯಾಗ್ಗಳು ಕಡಿಮೆ ಬೆಲೆಯ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತವೆ ಮತ್ತು ಮಾರಾಟವನ್ನು ಕಡಿಮೆ ಮಾಡುತ್ತದೆ ಎಂದು ಭಾರತೀಯ ತಯಾರಕರು ಪ್ರಶ್ನೆ ಮಾಡುತ್ತಾರೆ. “ಅವರು ವಿದೇಶದಲ್ಲಿ ಇದನ್ನು ಅನುಸರಿಸುತ್ತಾರೆ. ಭಾರತದಲ್ಲಿ ಬಡವರ ಜೀವನ ಯಾವುದಕ್ಕೂ ಯೋಗ್ಯವಾಗಿಲ್ಲವೇ?” ಎಂದಿದ್ದಾರೆ.
ಪ್ರತಿ ಏರ್ಬ್ಯಾಗ್ಗೆ ರೂ 900 ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.