ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಬುಧವಾರ ನವದೆಹಲಿಯಲ್ಲಿ ಭಾರತೀಯ ಸ್ವಾತಂತ್ರ್ಯ ವೀರರು ಮತ್ತು ಅವರು ಸಾಧಿಸಿದ ಮೈಲಿಗಲ್ಲುಗಳ ಕುರಿತ ಆನ್ಲೈನ್ ಮೊಬೈಲ್ ಗೇಮ್ ಆಜಾದಿ ಕ್ವೆಸ್ಟ್ ಗೆ ಚಾಲನೆ ನೀಡಿದರು.
ಇದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಆನ್ಲೈನ್ ಶೈಕ್ಷಣಿಕ ಆಟಗಳ ಸರಣಿಯಾಗಿದೆ, ಇದನ್ನು Zynga ಇಂಡಿಯಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಮೋಜಿನ ಆಟದೊಂದಿಗೆ ಸಂವಾದಾತ್ಮಕ ಕಲಿಕೆಗಾಗಿ ಎಲ್ಲಾ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಆಟಿಕೆಗಳು ಮತ್ತು ಆಟಗಳ ಮೂಲಕ ಜನರನ್ನು ತೊಡಗಿಸಿಕೊಂಡು ಮನರಂಜನೆ ಮತ್ತು ಶಿಕ್ಷಣ ನೀಡಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಯಿಂದ ಪ್ರೇರಿತವಾಗಿ ಇದನ್ನು ಆರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ಆಜಾದಿ ಕ್ವೆಸ್ಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಇದು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದಿದ್ದಾರೆ.
ಇದು ವಿಶಿಷ್ಟ ಆನ್ಲೈನ್ ಗೇಮ್ ಆಗಿದ್ದು, ಜನರನ್ನು ತೊಡಗಿಸಿಕೊಳ್ಳುವ ಮತ್ತು ಶಿಕ್ಷಣ ನೀಡುವ ಜೊತೆಗೆ ಮನರಂಜನೆ ನೀಡುತ್ತದೆ ಎಂದರು. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ದೇಶಾದ್ಯಂತ 60 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಠಾಕೂರ್ ಹೇಳಿದರು.
ಹೆಚ್ಚುತ್ತಿರುವ ಅನಿಮೇಷನ್, ವಿಷುಯಲ್-ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್- AVGC ವಲಯದ ಕುರಿತು ಮಾತನಾಡಿದ ಠಾಕೂರ್, ಭಾರತದಲ್ಲಿ ಈ ವಲಯವನ್ನು ಪೋಷಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ಭಾರತವು ಗೇಮಿಂಗ್ ವಲಯದಲ್ಲಿ ಅಗ್ರ 5 ದೇಶಗಳ ಸಾಲಲ್ಲ ನಂತಿದೆ ಎಂದಿದ್ದಾರೆ..
2021 ರಲ್ಲಿ ಗೇಮಿಂಗ್ ಕ್ಷೇತ್ರವು ಶೇಕಡಾ 28 ರಷ್ಟು ಬೆಳವಣಿಗೆಯಾಗಿದೆ ಎಂದ ಅವರು, ಕಳೆದ ವರ್ಷ ಆನ್ಲೈನ್ ಗೇಮರ್ಗಳ ಸಂಖ್ಯೆ 40 ಕೋಟಿಗೆ ಏರಿದೆ ಮತ್ತು 2023 ರ ವೇಳೆಗೆ 45 ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.