News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲ್ಲಾ ಪಕ್ಷದ ಸಂಸದರಿಗೆ ‘ತಿರಂಗಾ ಬೈಕ್ ರ‍್ಯಾಲಿ’ ಆಯೋಜಿಸುತ್ತಿದೆ ಕೇಂದ್ರ

ನವದೆಹಲಿ: ನಾಳೆ ಬೆಳಿಗ್ಗೆ ಎಲ್ಲಾ ಪಕ್ಷಗಳ ಸಂಸದರಿಗಾಗಿ ಸಂಸ್ಕೃತಿ ಸಚಿವಾಲಯ ಕೆಂಪುಕೋಟೆಯಿಂದ ಸಂಸತ್ತಿನವರೆಗೆ ‘ತಿರಂಗಾ ಬೈಕ್ ರ‍್ಯಾಲಿ’ ಆಯೋಜಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೋಶಿ ಅವರು, ಇದು ಸಂಸ್ಕೃತಿ ಸಚಿವಾಲಯದ ಕಾರ್ಯಕ್ರಮವಾಗಿದೆ ಮತ್ತು ನಮ್ಮ ಪಕ್ಷದಲ್ಲ ಎಂದು ಒತ್ತಿಹೇಳಿದರು.  ಬೆಳಿಗ್ಗೆ 8.30 ಕ್ಕೆ ಎಲ್ಲಾ ಪಕ್ಷಗಳ ಸಂಸದರನ್ನು ರ‍್ಯಾಲಿಗೆ ಬಂದು ಸೇರುವಂತೆ ಕೇಳಿಕೊಂಡರು.

ಸಭೆಯಲ್ಲಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 9ರಿಂದ ಆಗಸ್ಟ್ 15ರವರೆಗೆ  ಒಂದು ವಾರದ ಕಾರ್ಯಕ್ರಮದಲ್ಲಿ ಪಕ್ಷದ ಸದಸ್ಯರಿಗೆ ಹಲವಾರು ಕಾರ್ಯಗಳ ಪಟ್ಟಿ ನೀಡಿದ್ದಾರೆ.

‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಚಾರ ಮಾಡಲು ಪಕ್ಷದ ಸದಸ್ಯರನ್ನು ಬೆಳಗ್ಗೆ 9 ರಿಂದ 11 ರ ನಡುವೆ ‘ಪ್ರಭಾತ್ ಫೇರಿ’ (ಬೆಳಗಿನ ಮೆರವಣಿಗೆ) ಕೈಗೊಳ್ಳುವಂತೆ ನಡ್ಡಾ ಕೇಳಿಕೊಂಡರು. ಬಿಜೆಪಿ ಯುವ ಘಟಕವು ದೇಶಾದ್ಯಂತ ಬೈಕ್‌ಗಳಲ್ಲಿ “ತಿರಂಗಾ ಯಾತ್ರೆ” ನಡೆಸಲಿದೆ ಎಂದು ಜೋಶಿ ಹೇಳಿದರು.

ಅಭಿಯಾನದ ಅಡಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ಮತ್ತು 15 ರ ನಡುವೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಒತ್ತಾಯಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top