News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೂಪುರ್‌ ಹತ್ಯೆಗಾಗಿ ಬಂದ ಪಾಕ್‌ ನುಸುಳುಕೋರ ಮಹಾರಾಜ ರಂಜಿತ್‌ ಸಿಂಗ್‌ ಪ್ರತಿಮೆ ಧ್ವಂಸ ಮಾಡಿದ್ದ

ನವದೆಹಲಿ: ನೂಪುರ್ ಶರ್ಮಾ ಅವರನ್ನು ಕೊಲ್ಲಲು ಪಾಕಿಸ್ಥಾನದಿಂದ ಭಾರತಕ್ಕೆ ಬಂದಿದ್ದ ನುಸುಳುಕೋರ 24 ವರ್ಷದ ರಿಜ್ವಾನ್ ಪಾಕಿಸ್ಥಾನದ ಈ ಹಿಂದಿನ ಇಮ್ರಾನ್ ಖಾನ್ ಸರ್ಕಾರಕ್ಕೆ ನಿಕಟವಾಗಿದ್ದ ತೆಹ್ರೀಕ್-ಎ-ಲಬ್ಬೈಕ್ ಎಂಬ ಮೂಲಭೂತ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅಂಶ ಇದೀಗ ಬಯಲಾಗಿದೆ.

ಈ ಸಂಘಟನೆ ಸಂಪೂರ್ಣ ಯೋಜನೆಯನ್ನು ರೂಪಿಸಿ ಭಾರತಕ್ಕೆ ರಿಜ್ವಾನ್‌ ಅನ್ನು ಕಳುಹಿಸಿತ್ತು. ಇದೀಗ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಆತ ಹೊಂದಿರಬಹುದಾದ ಸ್ಥಳೀಯ ಸಂಪರ್ಕವನ್ನು ಪತ್ತೆ ಹಚ್ಚಲು ಐಬಿ, ಮಿಲಿಟರಿ ಇಂಟೆಲಿಜೆನ್ಸ್, ಬಿಎಸ್ಎಫ್ ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಆಗಸ್ಟ್ 2021 ರಲ್ಲಿ ಪಾಕಿಸ್ಥಾನದ ಲಾಹೋರ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ರಿಜ್ವಾನ್ ಧ್ವಂಸ ಮಾಡಿದ್ದಾನೆ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ.

ಜುಲೈ 16 ರಂದು ರಾತ್ರಿ 11 ಗಂಟೆ ಸುಮಾರಿಗೆ ಶ್ರೀ ಗಂಗಾನಗರದ ಹಿಂದೂ ಮಲ್ಕೋಟ್ ಗಡಿ ಬೇಲಿಯಿಂದ ರಿಜ್ವಾನ್‌ನನ್ನು ಬಂಧಿಸಲಾಗಿದೆ. ಈತನ ಬಳಿ  ಚಾಕು, ನಕ್ಷೆ ಮತ್ತು ಧಾರ್ಮಿಕ ಪುಸ್ತಕಗಳು ಇತ್ತು.  ಆತನ ಬಳಿ ಮೊಬೈಲ್ ಅಥವಾ ಸಿಮ್ ಇರಲಿಲ್ಲ. ತಾನು ನೂಪುರ್ ಶರ್ಮಾಳನ್ನು ಕೊಲ್ಲಲು ಬಂದಿದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದ. ಅವನು ತುಂಬಾ ಸ್ಮಾರ್ಟ್ ಇದ್ದಾನೆ  ಮತ್ತು  ಯಾವುದೇ ಸಂಪರ್ಕಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ .

ಸ್ಥಳೀಯರ ಸಹಾಯವಿಲ್ಲದೆ ಇಷ್ಟು ದೊಡ್ಡ ಘಟನೆಯ ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಬುಧವಾರ ವಿಚಾರಣೆ ವೇಳೆ ರಿಜ್ವಾನ್ ತೆಹ್ರೀಕ್-ಎ-ಲಬ್ಬೈಕ್ ಜೊತೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂಸ್ಥೆಯ ಸಂಪರ್ಕಕ್ಕೆ ಬಂದಿರುವ ಸ್ಥಳಿಯರನ್ನಯ ಹುಡುಕುವ ಪ್ರಯತ್ನ ನಡೆಸಲಾಗುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top