News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಗ್ನಿಪಥ್‌ನಲ್ಲಿ ಜಾತಿ ಆರೋಪ ಕೇವಲ ವದಂತಿ, ಹಿಂದಿನ ವ್ಯವಸ್ಥೆಯೇ ಈಗಲೂ ಇದೆ: ರಾಜನಾಥ್

ನವದೆಹಲಿ: ಅಗ್ನಿಪಥ ಯೋಜನೆಯಡಿ ನೇಮಕಾತಿಗಾಗಿ ಜಾತಿ ಪ್ರಮಾಣ ಪತ್ರಗಳನ್ನು ಕೇಳಲಾಗುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಸಂಸತ್ ಆವರಣದಲ್ಲಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವರು, ಅಗ್ನಿಪಥ ಯೋಜನೆಯಲ್ಲಿ ನೇಮಕಾತಿಗಾಗಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ ಎಂಬುದು ಕೇವಲ ವದಂತಿ. ಸ್ವಾತಂತ್ರ್ಯ ಪೂರ್ವದಿಂದ ಸೇನಾ ನೇಮಕಾತಿಗಾಗಿ ಯಾವ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿತ್ತೋ ಅದೇ ವ್ಯವಸ್ಥೆಯನ್ನು ಈಗಲೂ ಅನುಸರಿಸಿಲಾಗುತ್ತಿದೆ. ಮುಂದೆಯೂ ಅದೇ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ” ಎಂದಿದ್ದಾರೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಅಗ್ನಿಪಥ್ ನೇಮಕಾತಿ ವಿಚಾರವಾಗಿ ಮಾತನಾಡಿದ್ದು, “ಎಎಪಿಯಂತಹ ಪಕ್ಷಗಳು ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ. ಸೇನಾ ನಿಯಮಗಳು 1954 ಮತ್ತು ರಕ್ಷಣಾ ಸೇವಾ ನಿಯಮಾವಳಿ 1987 ರ ಪ್ರಕಾರ ನೇಮಕಾತಿಗಳನ್ನು ಮಾಡಲಾಗುತ್ತದೆ. ಎಎಪಿಯಂತಹ ಕೆಲವು ಪಕ್ಷಗಳು ತಪ್ಪುದಾರಿಗೆಳೆಯಲು ಮತ್ತು ಸುಳ್ಳು ಹೇಳಲು ಪ್ರಯತ್ನಿಸುತ್ತವೆ. ಅವರು ಸತ್ಯವನ್ನು ತಿಳಿಯದೆ ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದಿದ್ದಾರೆ.

“ಯಾವುದೇ ಬದಲಾವಣೆಗಳಿಲ್ಲ, ವಿವರಗಳು ಈ ಹಿಂದೆ ಸಂಗ್ರಹಿಸಿದಂತೆಯೇ ಇವೆ. ಲಕ್ಷಗಟ್ಟಲೆ ಯುವಕರು ಅಗ್ನಿವೀರರಾಗಲು ಅರ್ಜಿ ಸಲ್ಲಿಸಿದ್ದಾರೆ, ಇದು ಪ್ರತಿಪಕ್ಷಗಳ ಪ್ರಚಾರ, ವಿಶೇಷವಾಗಿ ಎಎಪಿಯ ಸುಳ್ಳುಗಳು ರಾಷ್ಟ್ರದ ಮುಂದೆ ಬಂದಿದೆ ಎಂದು ಇದು ತೋರಿಸುತ್ತದೆ. ಎಎಪಿ ಸುಳ್ಳಿನ ರಾಜಕೀಯ ಮಾಡುತ್ತದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top