News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲೀಟರ್‌ಗೆ 4 ರೂ ನೀಡಿ ಗೋಮೂತ್ರ ಖರೀದಿಸಲಿದೆ ಛತ್ತೀಸ್‌ಗಢ ಸರ್ಕಾರ

ನವದೆಹಲಿ: ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಜುಲೈ 28ರಿಂದ ಪ್ರತಿ ಲೀಟರ್‌ಗೆ ಕನಿಷ್ಠ 4 ರೂಪಾಯಿ ದರದಲ್ಲಿ ಗೋಮೂತ್ರವನ್ನು ಖರೀದಿಸಲು ಪ್ರಾರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಛತ್ತೀಸ್‌ಗಢ ಸರ್ಕಾರ ʼಗೋಧನ್‌ ನ್ಯಾಯ ಯೋಜನಾʼವನ್ನು ಆರಂಭಿಸಿದ್ದು, ಸೆಗಣಿಯನ್ನೂ ಈ ಯೋಜನೆಯಡಿ ಖರೀದಿ ಮಾಡಲಾಗುತ್ತದೆ. ದನ-ಪಾಲಕರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾದ ಯೋಜನೆ ಇದಾಗಿದೆ.

“ಮೊದಲ ಹಂತದಲ್ಲಿ, ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ ‘ಗೋಧನ್’ (ಗೋವಿನ ಆಶ್ರಯ ತಾಣ) ಗಳಲ್ಲಿ  ಗೋಮೂತ್ರ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಗೋಧನ್ ನಿರ್ವಹಣಾ ಸಮಿತಿಯು ಸ್ಥಳೀಯ ಮಟ್ಟದಲ್ಲಿ ಗೋಮೂತ್ರದ ದರವನ್ನು ನಿಗದಿಪಡಿಸಲಿದೆ. ಆದರೆ ಕೃಷಿ ಅಭಿವೃದ್ಧಿ ಮತ್ತು ರೈತರು ಕಲ್ಯಾಣ ಇಲಾಖೆಯು ಪ್ರತಿ ಲೀಟರ್‌ಗೆ ಕನಿಷ್ಠ 4 ರೂ ನೀಡಿ ಗೋಮೂತ್ರ ಖರೀದಿ ಮಾಡಲಿದೆ.

ಛತ್ತೀಸ್‌ಗಢವು ಜುಲೈ 2020 ರಲ್ಲಿ ಸ್ಥಳೀಯ ಹರೇಲಿ ಹಬ್ಬದಂದು ‘ಗೋಧನ್ ನ್ಯಾಯ್ ಯೋಜನೆ’ಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಎರೆಹುಳು ಗೊಬ್ಬರವನ್ನು ತಯಾರಿಸಲು ಪ್ರತಿ ಕಿಲೋಗ್ರಾಂಗೆ 2 ರೂಪಾಯಿಗಳಂತೆ ಹಸುವಿನ ಸಗಣಿ ಸಂಗ್ರಹಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರಕಾರವು 150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಸುವಿನ ಸಗಣಿ ಸಂಗ್ರಹಿಸಿದ್ದು, ಸ್ವಸಹಾಯ ಸಂಘಗಳು 20 ಲಕ್ಷ ಕ್ವಿಂಟಲ್ ವರ್ಮಿಕಾಂಪೋಸ್ಟ್, ಸೂಪರ್ ಕಾಂಪೋಸ್ಟ್ ಮತ್ತು ಸೂಪರ್ ಪ್ಲಸ್ ಕಾಂಪೋಸ್ಟ್ ಉತ್ಪಾದಿಸಿದ್ದು, ಇದಕ್ಕಾಗಿ 143 ಕೋಟಿ ರೂ.ಗಳನ್ನು ಪಡೆದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top