ಬೀಜಿಂಗ್: ಚೀನಾ ರಾಜಧಾನಿ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಶನಿವಾರದಂದು ಇಂಡಿಯಾ ಹೌಸ್ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಿತ್ತು, ಇದರಲ್ಲಿ ಶಾಂಘೈ, ಗುವಾಂಗ್ಝೌ ಮತ್ತು ಹಾಂಗ್ಕಾಂಗ್ನಲ್ಲಿರುವ ಭಾರತೀಯ ಕಾನ್ಸುಲೇಟ್ಗಳು, ಭಾರತೀಯ ವಲಸಿಗರು, 500 ಕ್ಕೂ ಹೆಚ್ಚು ಚೀನೀ ಯೋಗ ಉತ್ಸಾಹಿಗಳು ಮತ್ತು ಬೀಜಿಂಗ್ನಲ್ಲಿರುವ ರಾಜತಾಂತ್ರಿಕರು ಸೇರಿದಂತೆ ಇತರ ರಾಷ್ಟ್ರಗಳ ಜನರು ಭಾಗವಹಿಸಿದ್ದರು.
ಚೀನಾದ ಭಾರತದ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಮಾತನಾಡಿ, “ಹಲವು ಘಟನೆಗಳಿಂದ ಜಗತ್ತು ನೆಮ್ಮದಿಯನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಮಾನಸಿಕ ಆತಂಕವನ್ನು ಎದುರಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತಿದೆ. ಸಾಂಕ್ರಾಮಿಕ ಯುಗದಲ್ಲಿ ಯೋಗದ ಅಗತ್ಯತೆ ಮಹತ್ವದ್ದಾಗಿದೆ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ನ ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ಅವರು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಯೋಗ ದಿನಾಚರಣೆಯ ವಿಶೇಷ ಸಂದೇಶವನ್ನು ಹಂಚಿಕೊಂಡರು.
“ಆಜಾದಿ ಕಾ ಅಮೃತ್ ಮಹೋತ್ಸವ”ವನ್ನು ಆಚರಿಸಲು, ಚೀನಾದಾದ್ಯಂತ 75 ಕ್ಕೂ ಹೆಚ್ಚು ಯೋಗ ಶಾಲೆಗಳನ್ನು ವಿವಿಧ ಕಾನ್ಸುಲೇಟ್ಗಳು ಮತ್ತು ಭಾರತೀಯ ಯೋಗ ಗುರುಗಳ ಸಹಾಯದಿಂದ ಆನ್ಲೈನ್ನಲ್ಲಿ ಸಂಪರ್ಕಿಸಲಾಗಿತ್ತು. ಚೀನಾದಲ್ಲಿ ‘ಓಂ ಶಿವ ಯೋಗ’ದ ಸಂಸ್ಥಾಪಕರಾದ ಮಣಿಪುರದ ಭಾರತೀಯ ಯೋಗ ಗುರು ಎನ್ ಕೆ ಸಿಂಗ್ ಅವರು ಯೋಗದ ಸಾಮಾನ್ಯ ಪ್ರಜ್ಞೆಯನ್ನು ಪಸರಿಸಲು ಆನ್ಲೈನ್ನಲ್ಲಿ ಸಂಪರಿಸಿದವರಿಗೆ ಸಾಮಾನ್ಯ ಯೋಗ ಪ್ರೋಟೋಕಾಲ್ ಅನ್ನು ಕಲಿಸಿಕೊಟ್ಟಿರು.
ಇಂಡಿಯಾ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ಇತರ ಪ್ರಮುಖ ಭಾರತೀಯ ಯೋಗ ಗುರುಗಳೂ ಭಾಗಿಯಾಗಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.