ಜಮ್ಮು: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀ ಅಮರನಾಥ್ ಯಾತ್ರೆಗಾಗಿ ಆನ್ಲೈನ್ ಹೆಲಿಕಾಪ್ಟರ್ ಬುಕಿಂಗ್ ಸೇವಾ ಪೋರ್ಟಲ್ ಅನ್ನು ಇಂದು ಪ್ರಾರಂಭಿಸಿದರು.
ಮೊದಲ ಬಾರಿಗೆ, ಭಕ್ತರು ಶ್ರೀನಗರದಿಂದ ನೇರವಾಗಿ ಪಂಚತಾರ್ಣಿಗೆ ಸುಲಭವಾಗಿ ಹೆಲಿಕಾಫ್ಟರ್ ಮೂಲಕ ಪ್ರಯಾಣಿಸಬಹುದು ಮತ್ತು ಒಂದೇ ದಿನದಲ್ಲಿ ಪವಿತ್ರ ಯಾತ್ರೆಯನ್ನು ಪೂರ್ಣಗೊಳಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಉತ್ತಮ ಸಂಪರ್ಕ ಮತ್ತು ಪ್ರವೇಶಕ್ಕಾಗಿ ಶ್ರೀನಗರದಿಂದ ಹೆಲಿಕಾಫ್ಟರ್ ಸೇವೆಗಳನ್ನು ಪರಿಚಯಿಸುವುದು ಸರ್ಕಾರದ ಸುದೀರ್ಘ ಅವಧಿಯ ಪ್ರಯತ್ನವಾಗಿತ್ತು, ಇದೀಗ ಅದು ಸಾಕಾರಗೊಂಡಿದೆ ಎಂದಿರುವ ಅವರು, ಹೆಲಿಕಾಫ್ಟರ್ ಸೇವೆ ಪಡೆಯಲು ಭಕ್ತರು ಬುಕಿಂಗ್ಗಾಗಿ ದೇಗುಲ ಮಂಡಳಿಯ ವೆಬ್ಸೈಟ್ಗೆ ಸುಲಭವಾಗಿ ಲಾಗ್ ಇನ್ ಮಾಡಬಹುದು ಎಂದು ಅವರು ಹೇಳಿದರು.
ಅಮರನಾಥ ಯಾತ್ರೆ ಜೂನ್ 30 ರಿಂದ ಪ್ರಾರಂಭವಾಗಲಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಅಮರನಾಥ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಈ ಬಾರಿ ಮತ್ತೆ ಆರಂಭವಾಗಿದೆ. ಹಿಮಾಲಯದ ಮಡಿಲಲ್ಲಿರುವ ಈ ಪವಿತ್ರ ಸ್ಥಳಕ್ಕೆ 43 ದಿನಗಳ ಪ್ರಯಾಣವನ್ನು ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಭಕ್ತರು ವರ್ಷವಿಡೀ ಕಾಯುತ್ತಾರೆ. ಈ ವರ್ಷ ಆಗಸ್ಟ್ 11 ರಂದು ಅಮರನಾಥ ದೇವಾಲಯವನ್ನು ಮುಚ್ಚಲಾಗುತ್ತದೆ. ಈ ವರ್ಷ ಇದೇ ಮೊದಲ ಬಾರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀನಗರದಿಂದ ಪಂಚತರ್ಣಿವರೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಅಮರನಾಥ ಗುಹೆಯನ್ನು ತಲುಪಲು ಪಂಚತರ್ಣಿಯಿಂದ 6 ಕಿ.ಮೀ ನಡೆಯಬೇಕು. ಅಮರನಾಥ ಯಾತ್ರೆಗೆ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.