ನವದೆಹಲಿ: ಕೇಂದ್ರ ಸಚಿವ ಸಂಪುಟವು ‘ಅಗ್ನಿಪಥ್’ ನೇಮಕಾತಿ ಯೋಜನೆಗೆ ಅನುಮೋದನೆ ನೀಡಿದ ಒಂದು ದಿನದ ನಂತರ, ಶಿಕ್ಷಣ ಸಚಿವಾಲಯ ಬುಧವಾರ ಈ ಯೋಜನೆಗೆ ಪೂರಕವಾದ ವಿಶೇಷ ಮೂರು ವರ್ಷಗಳ ಕೌಶಲ್ಯ ಆಧಾರಿತ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ.
ಅಗ್ನಿ ವೀರರ ವೃತ್ತಿಪರ ಅವಕಾಶಗಳನ್ನು ವೃದ್ಧಿಸಲು ಮತ್ತು ನಾಗರಿಕ ವಲಯದ ವಿವಿಧ ಉದ್ಯೋಗ ಪಾತ್ರಗಳಲ್ಲಿ ಅವರನ್ನು ಸಜ್ಜುಗೊಳಿಸಲು ಈ ಪದವಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೌಶಲ್ಯ ಆಧಾರಿತ ಪದವಿ ಕಾರ್ಯಕ್ರಮವು ಅಗ್ನಿವೀರರು ಸೇನಾ ನಿಯೋಜನೆ ಸಂದರ್ಭದಲ್ಲಿ ಪಡೆದ ಪಡೆದುಕೊಂಡ ತರಬೇತಿಯನ್ನು ಮಾನ್ಯ ಗೊಳಿಸುತ್ತದೆ.
ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಯಲ್ಲಿ ಈ ಪದವಿ ಕಾರ್ಯಕ್ರಮವನ್ನು ಒದಗಿಸಲಾಗುತ್ತದೆ ಮತ್ತು ಈ ಪದವಿಯನ್ನು ಭಾರತ ಮತ್ತು ವಿದೇಶದಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪರಿಗಣಿಸಲಾಗುತ್ತದೆ ಎಂದಿದೆ.
ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ, ವಾಣಿಜ್ಯ, ಪ್ರವಾಸೋದ್ಯಮ, ವೃತ್ತಿಪರ ಅಧ್ಯಯನಗಳು, ಕೃಷಿ ಮತ್ತು ಜ್ಯೋತಿಷ್ಯದಂತಹ ವಿವಿಧ ವಿಷಯಗಳನ್ನು ಒಳಗೊಂಡಿರುವ ಕೋರ್ಸ್ಗಳನ್ನು ಇದು ಒಳಗೊಳ್ಳಲಿದೆ. ಇಂಗ್ಲಿಷಿನಲ್ಲಿ ಎನ್ವಿರಾನ್ಮೆಂಟಲ್ ಸ್ಟಡೀಸ್ ಮತ್ತು ಕಮ್ಯುನಿಕೇಷನ್ ಸ್ಕಿಲ್ಸ್ನ ಸಾಮರ್ಥ್ಯ ವರ್ಧನೆಯ ಕೋರ್ಸ್ಗಳೂ ಕೂಡ ಇರಲಿದೆ ಎಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಾರ್ಯಕ್ರಮವು ಯುಜಿಸಿ ಮಾನದಂಡಗಳೊಂದಿಗೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಕಡ್ಡಾಯಗೊಳಿಸಿದ ರಾಷ್ಟ್ರೀಯ ಕ್ರೆಡಿಟ್ ಫ್ರೇಮ್ವರ್ಕ್/ರಾಷ್ಟ್ರೀಯ ಕೌಶಲ್ಯ ಅರ್ಹತಾ ಫ್ರೇಮ್ವರ್ಕ್ (NSQF) ನೊಂದಿಗೆ ಸಂಯೋಜಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.