ನವದೆಹಲಿ: ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆಗೆ ದೊಡ್ಡ ಬದಲಾವಣೆಯನ್ನು ತರುವ ಸಲುವಾಗಿ ‘ಅಗ್ನಿಪಥ್ ನೇಮಕಾತಿ ಯೋಜನೆ’ಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಘೋಷಣೆ ಮಾಡಿದ್ದಾರೆ.
ಅಗ್ನಿಪಥ್ ಯೋಜನೆಯ ಮೂಲಕ ಸೇನೆಗೆ ನಾಲ್ಕು ವರ್ಷಗಳ ಕಾಲ ಯುವಕರನ್ನು ನೇಮಕ ಮಾಡಲಾಗುತ್ತದೆ. ಇದರ ಜೊತೆಗೆ ಸೇವೆಯನ್ನು ತೊರೆಯುವ ಸಂದರ್ಭದಲ್ಲಿ ಸೇವಾ ನಿಧಿ ಪ್ಯಾಕೇಜ್ ದೊರೆಯಲಿದೆ. ಯೋಜನೆಯ ಮೂಲಕ ಸೇನೆಗೆ ಸೇರುವ ಯುವಕರಿಗೆ ‘ಅಗ್ನಿವೀರ್’ ಎಂದು ಹೆಸರಿಸಲಾಗುತ್ತದೆ.
ಅಗ್ನಿಪತ್ ಯೋಜನೆಯ ವಿಶೇಷತೆಗಳು
-ಯುವಕರನ್ನು ನಾಲ್ಕು ವರ್ಷಕ್ಕಾಗಿ ಸೇನೆಗೆ ನಿಯೋಜಿಸಲಾಗುತ್ತದೆ
-ಇದರಡಿ ಅಗ್ನಿ ವೀರರಿಗೆ ಆಕರ್ಷಕ ವೇತನ ದೊರೆಯಲಿದೆ
-ಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆ ಬಳಿಕ ಯುವಕರ ಭವಿಷ್ಯಕ್ಕಾಗಿ ಮತ್ತಷ್ಟು ಅವಕಾಶ ನೀಡಲಾಗುತ್ತದೆ
-ನಾಲ್ಕು ವರ್ಷಗಳ ಸೇವೆ ಬಳಿಕ ಸೆವಾ ನಿಧಿ ಪ್ಯಾಕೇಜ್ ದೊರೆಯಲಿದೆ
-ಈ ಯೋಜನೆಯಡಿ ನೇಮಕಾತಿಗೊಳ್ಳುವ ಯುವಕರನ್ನು ನಾಲ್ಕು ವರ್ಷಗಳ ಬಳಿಕ ಸ್ವತಂತ್ರಗೊಳಿಸಲಾಗುತ್ತದೆ, ಆದರೆ ಕೆಲವರು ತಮ್ಮ ಸೇವೆಯನ್ನು ಮುಂದುವರೆಸಬಹುದು
– 17.5 ವರ್ಷಗಳಿಂದ 21 ವರ್ಷದ ಯುವಕರಿಗೆ ಅವಕಾಶ
-10 ವಾರಗಳಿಂದ 6 ತಿಂಗಳುಗಳವರೆಗೆ ತರಬೇತಿ ನೀಡಲಾಗುತ್ತದೆ
-90 ದಿನ ಅಗ್ನಿವೀರರ ಮೊದಲ ನೇಮಕಾತಿ ನಡೆಯಲಿದೆ
-ಒಂದು ವೇಳೆ ಕರ್ತವ್ಯದ ಸಂದರ್ಭದಲ್ಲಿ ಅಗ್ನಿ ವೀರರು ಹುತಾತ್ಮರಾದರೆ ಅವರ ಅವಲಂಬಿತರಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಿಗುತ್ತದೆ. ಅಷ್ಟೇ ಅಲ್ಲದೆ ಉಳಿದ ಅವಧಿಯ ಕರ್ತವ್ಯದ ವೇತನವೂ ಸಿಗಲಿದೆ
-ಒಂದು ವೇಳೆ ಅಗ್ನಿವೀರ ಅಂಗವೈಕಲ್ಯಕ್ಕೆ ಒಳಗಾದರೆ 44 ಲಕ್ಷ ರೂಪಾಯಿ ಹಣ ಸಿಗಲಿದೆ ಮತ್ತು ಬಾಕಿ ಕರ್ತವ್ಯದ ಅವಧಿಯ ವೇತನ ಸಿಗಲಿದೆ
ದೇಶಾದ್ಯಂತ ಅರ್ಹತೆಗೆ ಅನುಗುಣವಾಗಿ ನೇಮಕಾತಿ ನಡೆಯಲಿದೆ. ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರಿಗೆ ನಾಲ್ಕು ವರ್ಷಗಳ ನೌಕರಿ ಸಿಗಲಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.