ನವದೆಹಲಿ: ತಾಂಜೇನಿಯಾದ ಯೋಜನೆಗಳಿಗೆ ಭಾರತ ಸರ್ಕಾರ ನೆರವು ನೀಡಿರುವುದಕ್ಕೆ ಅಲ್ಲಿನ ಸರ್ಕಾರ ಕೃತಜ್ಞತೆಯನ್ನು ಅರ್ಪಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು “ಅಗತ್ಯ ಸ್ನೇಹಿತ” ಎಂದು ಬಣ್ಣಿಸಿದೆ.
ಪೂರ್ವ-ಆಫ್ರಿಕನ್ ರಾಷ್ಟ್ರ ತಾಂಜೇನಿಯಾದ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಗುರಿಯನ್ನು ಹೊಂದಿರುವ $500 ಮಿಲಿಯನ್ಗಿಂತಲೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಧನಸಹಾಯ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಾಸನ್ ಧನ್ಯವಾದ ಸಲ್ಲಿಸಿದ್ದಾರೆ.
“ನಮ್ಮ ದೇಶಕ್ಕೆ ಭಾರತ ಸರ್ಕಾರ ನೀಡಿದ ಬೆಂಬಲದಿಂದ ನಮ್ಮ ಹೃದಯ ತುಂಬಿ ಬಂದಿದೆ” ಎಂದು ಅವರು ಹೇಳಿದ್ದಾರೆ.
“ಭಾರತದ ಜನರಿಗೆ ಮತ್ತು ಸರ್ಕಾರಕ್ಕೆ ತನ್ನ ಕೃತಜ್ಞತೆಯನ್ನು ತಿಳಿಸುವಂತೆ ತಾಂಜೇನಿಯಾದಲ್ಲಿನ ಭಾರತದ ಹೈ ಕಮಿಷನರ್ ಬಿನಯಾ ಪ್ರಧಾನ್ ಅವರಿಗೆ ಸಾಮಿಯಾ ವಿನಂತಿಸಿದ್ದಾರೆ. “ಅವಶ್ಯಕತೆಗೆ ಬರುವ ಸ್ನೇಹಿತ ನಿಜವಾದ ಸ್ನೇಹಿತ. ಆದ್ದರಿಂದ, ತುಂಬಾ ಧನ್ಯವಾದಗಳು” ಎಂದಿದ್ದಾರೆ.
2018 ರಲ್ಲಿ ಪ್ರಧಾನಿ ಮೋದಿಯವರ ದಕ್ಷಿಣ ಆಫ್ರಿಕಾದ ಭೇಟಿಯ ಸಮಯದಲ್ಲಿ, ತಾಂಜಾನಿಯಾದ ಅರೆ ಸ್ವಾಯತ್ತ ಜಂಜಿಬಾರ್ ದ್ವೀಪಗಳಲ್ಲಿನ ನೀರಿನ ಯೋಜನೆಗಳಿಗಾಗಿ $ 92 ಮಿಲಿಯನ್ (ಸುಮಾರು ರೂ 612.1 ಕೋಟಿ) ಸಾಲ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರು.
“A friend in need is a friend indeed”, compliments from H.E. President of Tanzania @SuluhuSamia at the contract signing ceremony for US$ 500 million projects in water sector@PMOIndia @MEAIndia @DrSJaishankar @MOS_MEA @dpa_mea @palkisu @gssjodhpur @DipanjanET pic.twitter.com/xCVAn3w7Tc
— Binaya Pradhan (@binaysrikant76) June 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.