ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮವು ಇಂಧನದ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಭಾರತದ ಇಂಧನ ಭದ್ರತೆ ಹೆಚ್ಚಿಸುತ್ತಿರುವು ಮಾತ್ರವಲ್ಲದೇ, ರೈತರ ಆದಾಯ ಮತ್ತು ಕೃಷಿ ವಲಯಕ್ಕೆ ಉತ್ತೇಜನ ನೀಡುತ್ತಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಎಥೆನಾಲ್ ಮಿಶ್ರಣದಿಂದ ಕಳೆದ ಎಂಟು ವರ್ಷಗಳಲ್ಲಿ ರೈತರಿಗೆ 40,600 ಕೋಟಿ ರೂ ಪಾವತಿಯಾಗಿದೆ.
ಈ ಅವಧಿಯಲ್ಲಿ, EBP ರೂ. 41,500 ಕೋಟಿಗಳಷ್ಟು ವಿದೇಶೀ ವಿನಿಮಯದ ಪ್ರಭಾವವನ್ನು ಸೃಷ್ಟಿಸಿದೆ ಮತ್ತು 27 ಲಕ್ಷ ಮೆಟ್ರಿಕ್ ಟನ್ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿದೆ.
2018 ರಲ್ಲಿ ಸರ್ಕಾರವು ಸೂಚಿಸಿದ ‘ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ’ 2030 ರ ವೇಳೆಗೆ ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣವನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಈ ಗುರಿಯನ್ನು 2030ರ ಬದಲು 2025 – 26ರಲ್ಲೇ ಸಾಧಿಸಲಾಗದೆ.
ಪ್ರಸ್ತುತ, ಭಾರತದಲ್ಲಿ ಎಥೆನಾಲ್ ಆರ್ಥಿಕತೆಯನ್ನು 20,000 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಇದು 2 ಲಕ್ಷ ಕೋಟಿಗೂ ಹೆಚ್ಚು ತಲುಪುವ ಗುರಿಯನ್ನು ಹೊಂದಿದೆ. 60 ವರ್ಷಗಳಿಂದ ತಮ್ಮ ಸಾರಿಗೆ ಉದ್ಯಮದಲ್ಲಿ ಎಥೆನಾಲ್ ಬಳಸುತ್ತಿರುವ ಬ್ರೆಜಿಲ್ನಂತಹ ದೇಶಗಳ ಹೆಜ್ಜೆಗಳನ್ನು ಭಾರತ ಅನುಸರಿಸಲು ಬಯಸಿದೆ ಮತ್ತು ಪೆಟ್ರೋಲ್ನಲ್ಲಿ ಶೇಕಡಾ 27 ರಷ್ಟು ಎಥೆನಾಲ್ನ ಕಡ್ಡಾಯ ಮಿಶ್ರಣವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.