ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ರೈಲು ಮಾರ್ಗ ನ್ಯೂ ಜಲ್ಪೈಗುರಿ-ಢಾಕಾ ಕಂಟೋನ್ಮೆಂಟ್ ‘ಮಿತಾಲಿ ಎಕ್ಸ್ಪ್ರೆಸ್’ಗೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಬಾಂಗ್ಲಾದೇಶದ ಸಚಿವ ಮೊಹಮ್ಮದ್ ನೂರುಲ್ ಇಸ್ಲಾಂ ಸುಜೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.
ಈ ರೈಲು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರನೇ ಪ್ರಯಾಣಿಕ ರೈಲು ಸೇವೆಯಾಗಿದೆ. ಹೊಸ ಜಲ್ಪೈಗುರಿ-ಢಾಕಾ ಕಂಟೋನ್ಮೆಂಟ್ ರೈಲು ವಾರದಲ್ಲಿ ಎರಡು ದಿನಗಳು, ಅಂದರೆ ಭಾನುವಾರ ಮತ್ತು ಬುಧವಾರದಂದು ಢಾಕಾಗೆ ಚಲಿಸುತ್ತದೆ.
ಸೋಮವಾರ ಮತ್ತು ಗುರುವಾರ ರೈಲ ವಾಪಾಸ್ ಪ್ರಯಾಣಿಸಲಿದೆ. ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಬಾಂಗ್ಲಾದೇಶದ ಢಾಕಾ ಕಂಟೋನ್ಮೆಂಟ್ ನಡುವಿನ ಸುಮಾರು 513 ಕಿಮೀ ದೂರವನ್ನು ಒಂಬತ್ತು ಗಂಟೆಗಳಲ್ಲಿ ಕ್ರಮಿಸುತ್ತದೆ.
ಈಗಿನಂತೆ, ರೈಲು ನಾಲ್ಕು ಹವಾನಿಯಂತ್ರಿತ ಕ್ಯಾಬಿನ್ ಕೋಚ್ಗಳು ಮತ್ತು ನಾಲ್ಕು ಹವಾನಿಯಂತ್ರಿತ ಚೇರ್ ಕಾರ್ಗಳೊಂದಿಗೆ ಚಲಿಸುತ್ತದೆ ಮತ್ತು ಡೀಸೆಲ್ ಲೊಕೊಮೊಟಿವ್ ಮೂಲಕ ಸಾಗುತ್ತದೆ. ಸುಮಾರು 15-20 ಪ್ರಯಾಣಿಕರು ಈಗಾಗಲೇ ಮೊದಲ ಪ್ರಯಾಣಕ್ಕಾಗಿ ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
🇮🇳 & 🇧🇩 Towards shared heritage, shared present and shared future!
Flagged off "Mitali Express" between New Jalpaiguri (India) and Dhaka (Bangladesh) with His Excellency Md Nurul Islam Sujan. pic.twitter.com/CYlVK0Jzva
— Ashwini Vaishnaw (@AshwiniVaishnaw) June 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.