ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯೊಂದಿಗೆ ಬಂದ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಅವರು ಚಾರಿಟಿಗೆ ನೀಡಿದ್ದಾರೆ.
ನಗದು ಬಹುಮಾನವನ್ನು ಚಾರಿಟಿಗೆ ನೀಡಲು ಅನುಮತಿಗಾಗಿ ಅವರು ಲತಾ ಮಂಗೇಶ್ಕರ್ ಸಹೋದರನಿಗೆ ಪತ್ರ ಬರೆದಿದ್ದರು. ಅನುಮತಿಯ ನಂತರ, ನಗದು ಹಣವನ್ನು ಚಾರಿಟಿಗೆ ದಾನ ಮಾಡಲಾಗಿದೆ.
“ನಮ್ಮ ಟ್ರಸ್ಟ್ ಇದನ್ನು ಪಿಎಂ ಕೇರ್ಸ್ ನಿಧಿಗೆ ನೀಡಲು ನಿರ್ಧರಿಸಿದೆ” ಎಂದು ದಿವಂಗತ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರ ಹೃದಯಂತ್ ಮಂಗೇಶ್ಕರ್ ಹೇಳಿದ್ದಾರೆ.
ಹೃದಯನಾಥ್ ಮಂಗೇಶ್ಕರ್ ಅವರಿಗೆ ಪತ್ರ ಬರದಿದ್ದ ಮೋದಿ ”ಪ್ರಶಸ್ತಿಯು ರೂ ಒಂದು ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಈ ಹಣವನ್ನು ನಿಮ್ಮ ಆಯ್ಕೆಯ ಯಾವುದಾರು ದತ್ತಿ ಸಂಸ್ಥೆಗೆ ದಾನ ಮಾಡಬಹುದೇ? ಎಂದು ನಾನು ವಿನಂತಿಸುತ್ತೇನೆ. ಇದರಿಂದ ಈ ಹಣವನ್ನು ಇತರರ ಜೀವನದಲ್ಲಿ ಧನಾತ್ಮಕ ವ್ಯತ್ಯಾಸವನ್ನು ತರಲು ಬಳಸಬಹುದು, ಲತಾ ದೀದಿ ಯಾವಾಗಲೂ ಇದನ್ನೇ ಮಾಡಲು ಬಯಸಿದ್ದರು” ಎಂದಿದ್ದರು.
ಮೋದಿ ಕೋರಿಕೆಯಂತೆ ಪ್ರಶಸ್ತಿ ಮೊತ್ತವನ್ನು ಮಂಗೇಶ್ಕರ್ ಕುಟುಂಬ ಪಿಎಂ ಕೇರ್ಸ್ಗೆ ದಾನ ಮಾಡಿದೆ.
PM Narendra Modi accepted the 1st ever Lata Deenanath Mangeshkar Award. He donated the cash prize of Rs 1 Lakh to charity
"Our Trust has decided to donate it to the PM Cares Fund," tweets Hridaynath Mangeshkar, musician & younger brother of singing maestro, late Lata Mangeshkar pic.twitter.com/2A6675bQdd
— ANI (@ANI) May 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.