ಸಿಲ್ಚಾರ್: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಕೀರ್ತಿ ಜಲ್ಲಿ ಅವರು ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಲ್ನಡಿಗೆ ಮೂಲಕ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ನೆರೆಯಿಂದ ಕೊಳಚೆಯಂತಾದ ಪ್ರದೇಶದಲ್ಲಿ ನಡೆದುಕೊಂಡು ಸಂತ್ರಸ್ತ ಜನರನ್ನು ಸಂಪರ್ಕಿಸಿ ಕುದುಕೊರತೆ ಆಲಿಸಿದ್ದಕ್ಕಾಗಿ ಅಧಿಕಾರಿಯನ್ನು ನೆಟಿಜನ್ಗಳು ಶ್ಲಾಘಿಸಿದ್ದಾರೆ.
ಇತ್ತೀಚಿನ ಪ್ರವಾಹದಲ್ಲಿ ಅಸ್ಸಾಂನ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಕ್ಯಾಚಾರ್ ಒಂದಾಗಿದೆ ಮತ್ತು ಈ ಜಿಲ್ಲೆಯಾದ್ಯಂತ 259 ಪರಿಹಾರ ಶಿಬಿರಗಳಲ್ಲಿ 54,000 ಕ್ಕೂ ಹೆಚ್ಚು ಜನರು ಇನ್ನೂ ಆಶ್ರಯ ಪಡೆದಿದ್ದಾರೆ. ಹೀಗಾಗಿ ಈ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಯಾಗಿರುವ ಕೀರ್ತಿ ಜಲ್ಲಿ ಬುಧವಾರ ಭೇಟಿ ನೀಡಿದರು.
ಆಕೆ ಸೀರೆಯನ್ನು ಧರಿಸಿ ಕೆಸರುಮಯ ಪ್ರದೇಶಗಳಲ್ಲಿ ನಡೆದಾಡಿ ಜನರ ಕುಂದುಕೊರತೆ ಆಲಿಸುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳನ್ನು ಆರಂಭದಲ್ಲಿ ಜಿಲ್ಲಾಡಳಿತದ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿತ್ತು. ಈ ಫೋಟೋಗಳು ಈಗ ವೈರಲ್ ಆಗಿದೆ.
ಜಲ್ಲಿ ಅವರು ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದಾಎರೆ, ಭವಿಷ್ಯಕ್ಕಾಗಿ ಉತ್ತಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅವರ ಕಾರ್ಯ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಹಲವು ವರ್ಷಗಳಿಂದ ಈ ಪ್ರದೇಶಗಳು ನೆರೆ ಸಮಸ್ಯೆ ಎದುರಿಸುತ್ತಿದೆ. ಆದರೆ ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದು ಸಮಸ್ಯೆ ಆಲಿಸಿಲ್ಲ. ಆದರೆ ಕೀರ್ತಿ ಜಲ್ಲಿ ಮೊದಲ ಬಾರಿಗೆ ಜನರ ಬಳಿ ಬಂದು ಕಷ್ಟ ಆಲಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಗ್ರಾಮಗಳಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು. ಬರಾಕ್ ನದಿಯ ಉಕ್ಕಿ ಹರಿಯುವುದರಿಂದ ಉಂಟಾದ ಪ್ರವಾಹದಿಂದ ಪ್ರತಿ ವರ್ಷ ನಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅವರಿಗೆ ವಿವರಿಸಿದ್ದೇವೆ ಎಂದಿದ್ದಾರೆ.
ಭವಿಷ್ಯದಲ್ಲಿ ಹಾನಿಯನ್ನು ಕಡಿಮೆ ಮಾಡಲು ಗ್ರಾಮಗಳ ರಕ್ಷಣೆಗೆ ಒತ್ತು ನೀಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕ್ಯಾಚಾರ್ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈ ವರ್ಷ 291 ಹಳ್ಳಿಗಳಲ್ಲಿ 163,000 ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಒಳಗಾಗಿದ್ದಾರೆ. 11,200 ಮನೆಗಳಿಗೆ ಹಾನಿಯಾಗಿದ್ದು, 5,915 ಹೆಕ್ಟೇರ್ ಪ್ರದೇಶವು ಮುಳುಗಿದೆ.
At first glance nobody will believe this is an IAS officer! After her pics went viral Keerthi Jalli, DC Cachar is receiving praise for her simplicity & service during flood crisis. Piggyback rider politicians can take a lesson or two from her! God bless. #Assam @IASassociation pic.twitter.com/sGJXs8WeOl
— Tulika Devi (@tulika_devi) May 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.