ಕಠ್ಮಂಡು: ಭಾರತ ಸರ್ಕಾರದ ನೆರವಿನ ಮೂಲಕ ನೇಪಾಳದಲ್ಲಿ ನಿರ್ಮಾಣ ಮಾಡಲಾದ ಶಾಲೆಯನ್ನು ನಿನ್ನೆ ಉದ್ಘಾಟನೆ ಮಾಡಲಾಗಿದೆ.
ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಭಾರತ ಸರ್ಕಾರದ ಅನುದಾನದ ನೆರವಿನ ಅಡಿಯಲ್ಲಿ ಕಾಸ್ಕಿ ಜಿಲ್ಲೆಯ ಧಂಡ್ ಬೆನ್ಸಿಯ ಪೋಖರಾ ಮೆಟ್ರೋಪಾಲಿಟನ್ ಸಿಟಿ-13 ನಲ್ಲಿರುವ ಶ್ರೀ ಅರ್ವಾ ಬಿಜಯ ಮಾಧ್ಯಮಿಕ ಶಾಲೆಯ ಹೊಸ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ.
ಯೋಜನೆಯ ಅಂದಾಜು ವೆಚ್ಚ ನೇಪಾಳ ರೂಪಾಯಿ 36.30 ಮಿಲಿಯನ್ ಮತ್ತು ಈ ಯೋಜನೆ ಶಿಕ್ಷಣ ವಲಯದಲ್ಲಿ ಭಾರತ-ನೇಪಾಳ ಅಭಿವೃದ್ಧಿ ಸಹಕಾರದ ಅಡಿಯಲ್ಲ ಸಮುದಾಯ ಅಭಿವೃದ್ಧಿ ಯೋಜನೆಯಾಗಿ ಪ್ರಾರಂಭವಾಯಿತು.
ಅಧಿಕೃತ ಹೇಳಿಕೆಯ ಪ್ರಕಾರ, “ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ನೇಪಾಳದಲ್ಲಿ ಈ ವರ್ಷ ಉದ್ಘಾಟನೆಗೊಳ್ಳುತ್ತಿರುವ 75 ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಶಾಲೆಯ ಅನುಷ್ಠಾನವು ಶಿಕ್ಷಣದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ಮೂಲಸೌಕರ್ಯವನ್ನು ರಚಿಸಲು ನೇಪಾಳ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಭಾರತ ಸರ್ಕಾರದ ನಿರಂತರ ಬೆಂಬಲವನ್ನು ತೋರಿಸುತ್ತದೆ”.
2003 ರಿಂದ, ಭಾರತವು ನೇಪಾಳದಲ್ಲಿ 527 ಹೈ ಇಂಪ್ಯಾಕ್ಟ್ ಕಮ್ಯುನಿಟಿ ಡೆವಲಪ್ಮೆಂಟ್ ಪ್ರಾಜೆಕ್ಟ್ಗಳನ್ನು (HICDPs) ಕೈಗೆತ್ತಿಕೊಂಡಿದೆ ಮತ್ತು ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಸಂಪರ್ಕ, ನೈರ್ಮಲ್ಯ ಮತ್ತು ಎಲ್ಲಾ 7 ಪ್ರಾಂತ್ಯಗಳಲ್ಲಿ ಇತರ ಸಾರ್ವಜನಿಕ ಉಪಯುಕ್ತತೆಗಳ ರಚನೆಯ ಕ್ಷೇತ್ರಗಳಲ್ಲಿ 470 ಯೋಜನೆಗಳನ್ನು ಪೂರ್ಣಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.