ನವದೆಹಲಿ:ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮಂಗಳವಾರ ನಗರಗಳ ವಾರ್ಷಿಕ ನೈರ್ಮಲ್ಯ ಸಮೀಕ್ಷೆ ʼಸ್ವಚ್ಛ ಸರ್ವೇಕ್ಷಣ್-2023ʼ ಅನ್ನು ‘ತ್ಯಾಜ್ಯದಿಂದ ಸಂಪತ್ತಿಗೆ’ ಎಂಬ ಥೀಮ್ನೊಂದಿಗೆ ಪ್ರಾರಂಭಿಸಿದೆ.
ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿಯಲ್ಲಿನ ʼಸ್ವಚ್ಛ ಸರ್ವೇಕ್ಷಣ್ -2023ʼ ನಗರಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನೈರ್ಮಲ್ಯ ಸಮೀಕ್ಷೆಯ ಎಂಟನೇ ಆವೃತ್ತಿಯಾಗಿದೆ.
“ವೇಸ್ಟ್ ಟು ವೆಲ್ತ್’ ಎಂಬ ಥೀಮ್ನೊಂದಿಗೆ ಈ ಬಾರಿಯ ಸಮೀಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. “Reduce, Recycle and Reuse”ಗೆ ಇದು ಹೆಚ್ಚಿನ ಆದ್ಯತೆಯನ್ನು ಇದು ನೀಡಲಿದೆ.
ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಮನೋಜ್ ಜೋಶಿ ಮಾತನಾಡಿ, “ಸ್ವಚ್ಛ ಸರ್ವೇಕ್ಷಣ್ ಕೇವಲ ಮೌಲ್ಯಮಾಪನ ಸಾಧನವಾಗದೆ ಸ್ಫೂರ್ತಿ ಸಾಧನವಾಗಿ ಅಭಿವೃದ್ಧಿಗೊಂಡಿದೆ. ಈ ಅತಿ ದೊಡ್ಡ ಸಮೀಕ್ಷೆಯು ತಳಮಟ್ಟದಲ್ಲಿ ಗಣನೀಯ ಬದಲಾವಣೆಗಳನ್ನು ತಂದಿದೆ, ನಗರಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮತ್ತು ಹೆಮ್ಮೆಯ ಭಾವನೆಯನ್ನು ಹೊಂದುವಂತೆ ಮಾಡುತ್ತಿದೆ” ಎಂದಿದ್ದಾರೆ.
ಕೆಲ ವರ್ಷಗಳಲ್ಲಿ, ಸ್ವಚ್ಛ ಸರ್ವೇಕ್ಷಣ್ ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಸಮೀಕ್ಷೆಯಾಗಿ ಹೊರಹೊಮ್ಮಿದೆ ಎಂದು ಸಚಿವಾಲಯ ಹೇಳಿದೆ.
ಸ್ವಚ್ಛ ಸಮೀಕ್ಷೆ ಪ್ರಾರಂಭವಾದಾಗ ನಗರಗಳು ಕೈಗೊಂಡ ಚಟುವಟಿಕೆಗಳಲ್ಲಿ ಹೆಚ್ಚಳವಾಗುವುದನ್ನು ನಾವು ಗಮನಿಸಿದ್ದೇವೆ. ಸಮೀಕ್ಷೆಯನ್ನು ನಡೆಸಿದ ತಿಂಗಳುಗಳಲ್ಲಿ ನಗರಗಳು ಸ್ವಚ್ಛವಾಗಿರುತ್ತವೆ. ಆದ್ದರಿಂದ 2023 ರಲ್ಲಿ, ಹಿಂದಿನ ಆವೃತ್ತಿಗಳಲ್ಲಿ ಇದ್ದ ಮೂರು ಹಂತಗಳ ಬದಲಿಗೆ ನಾಲ್ಕು ಹಂತಗಳಲ್ಲಿ ಮೌಲ್ಯಮಾಪನವನ್ನು ನಡೆಸಲಾಗುತ್ತದೆ ಎಂದಿದೆ.
ಸಮೀಕ್ಷೆಯ 2022 ಆವೃತ್ತಿ ಪೂರ್ಣಗೊಂಡಿದೆ ಮತ್ತು ಫಲಿತಾಂಶಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಸಮೀಕ್ಷೆಯು 4,355 ನಗರಗಳನ್ನು ಒಳಗೊಂಡಿದೆ ಮತ್ತು 1.14 ಕೋಟಿ ನಾಗರಿಕರ ಪ್ರತಿಕ್ರಿಯೆಯನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.