ನವದೆಹಲಿ: ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಮತ್ತು ವೈವಿಧ್ಯತೆಯು ಎಂದಿಗೂ ಸಂಘರ್ಷಕ್ಕೆ ಕಾರಣವಲ್ಲ ಎಂದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
“ವೈವಿಧ್ಯತೆಯು ಎಂದಿಗೂ ಸಂಘರ್ಷಕ್ಕೆ ಕಾರಣವಲ್ಲ. ಭಾರತವು ಮರ್ಯಾದಾ ಪುರುಷೋತ್ತಮ ರಾಮನನ್ನು ಪೂಜಿಸುವ ಮತ್ತು ಸ್ಥಾಪಿತ ಮಿತಿಗಳನ್ನು ಮೀರಿ ನಿಂತ ಕೃಷ್ಣನನ್ನು ಪೂಜಿಸುವ ದೇಶವಾಗಿದೆ. ನಾವು ಪೂರ್ಣಿಮಾ ಮತ್ತು ಅಮವಾಸ್ಯೆಗಳನ್ನು ಸಹ ನಾವು ಆಚರಿಸುತ್ತೇವೆ” ಎಂದಿದ್ದಾರೆ.
“ಎಲ್ಲಾ ಧರ್ಮದ ಜನರು ಸೌಹಾರ್ದತೆಯಿಂದ ಬದುಕುವ ವಿಶ್ವದ ಏಕೈಕ ದೇಶ ಭಾರತ. ಈ ದೇಶದಲ್ಲಿ ಮುಸ್ಲಿಂ ಸಮಾಜದ 72 ವಿಭಾಗಗಳು ಕಂಡುಬರುತ್ತವೆ. ಭಾರತದ ಅತ್ಯಂತ ಹಳೆಯ ಚರ್ಚ್ (ಕೇರಳದ ಸೇಂಟ್ ಥಾಮಸ್ ಚರ್ಚ್) ಯುಗಗಳಷ್ಟು ಹಿಂದಿನದು. ಪಾರ್ಸಿ ಸಮುದಾಯದವರು ತಾಯ್ನಾಡಿನಲ್ಲಿ ಕಿರುಕುಳವನ್ನು ಎದುರಿಸಿದಾಗ ಮೊದಲು ಬಂದದ್ದು ಈ ದೇಶಕ್ಕೆ” ಎಂದಿದ್ದಾರೆ.
“ಇಂದು ಜಗತ್ತು ಬದಲಾಗುತ್ತಿರುವ ರೀತಿ ಎಲ್ಲರಿಗೂ ತಿಳಿದಿದೆ. ಎಲ್ಲಾ ವೈಜ್ಞಾನಿಕ ಬೆಳವಣಿಗೆಗಳ ಜೊತೆಗೆ ಮಾನವ ಜೀವನವು ಒಂದೆಡೆ ಸುಲಭವಾಗುತ್ತಿದೆ ಮತ್ತು ಇನ್ನೊಂದೆಡೆ ಅಡೆತಡೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತು ಮತ್ತೊಮ್ಮೆ ಮಾನವೀಯತೆಯ ಕಲ್ಯಾಣದ ಬಗ್ಗೆ ಯೋಚಿಸಬೇಕಾಗಿದೆ. ಇದರಲ್ಲಿ ಭಾರತವು ನಾಯಕನ ಪಾತ್ರವನ್ನು ವಹಿಸಬೇಕಿದೆ. ಜಗತ್ತಿಗೆ ಮತ್ತೊಮ್ಮೆ ಬೆಳಕು, ಮಾರ್ಗದರ್ಶನವನ್ನು ನಮ್ಮ ದೇಶವು ತನ್ನ ಆಲೋಚನೆಗಳ ಮೂಲಕ ಈ ಜಗತ್ತಿಗೆ ಒದಗಿಸುವ ಅಗತ್ಯವಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.