ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಧ್ವನಿವರ್ಧಕದ ಗದ್ದಲದ ನಡುವೆ, ಯುನೈಟೆಡ್ ಹಿಂದೂ ಫ್ರಂಟ್ (ಯುಎಚ್ಎಫ್), ಮಹಾಕಾಲ್ ಮಾನವ್ ಸೇವಾ ಮುಂತಾದ ಹಿಂದೂ ಸಂಘಟನೆಯು ಕುತುಬ್ ಮಿನಾರ್ ಆವರಣದಲ್ಲಿ ಇಂದು ಹನುಮಾನ್ ಚಾಲೀಸಾವನ್ನು ಪಠಿಸಿದೆ.
ಶತಮಾನಗಳಷ್ಟು ಹಳೆಯದಾದ ಕುತುಬ್ ಮಿನಾರ್ ಅನ್ನು ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ದಿಲ್ಲಿಯ ಕುತುಬ್ ಮಿನಾರ್ ಬಳಿ ಇಂದು ಪ್ರತಿಭಟನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂ ಸಂಘಟನೆಯ ಪಠಣದ ಹಿನ್ನೆಲೆಯಲ್ಲಿ ಐತಿಹಾಸಿಕ ಸ್ಮಾರಕದ ಹೊರಗೆ ದೆಹಲಿ ಪೊಲೀಸರು ಮತ್ತು ಸಿಎಪಿಎಫ್ ಸಿಬ್ಬಂದಿಯ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.
ಕುತುಬ್ ಮಿನಾರ್ ಕಾಂಪ್ಲೆಕ್ಸ್ನಲ್ಲಿರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯ ರಚನೆಯಲ್ಲಿ ಎರಡು ತಲೆಕೆಳಗಾದ ಗಣೇಶನ ವಿಗ್ರಹಗಳು ಇದ್ದು, ಇವುಗಳು ಇರುವ ಭಂಗಿ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಹಲವಾರು ಹಿಂದೂ ಸಂಘಟನೆಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿವೆ
ಸಂಘಟನೆಗಳು ವಿಗ್ರಹಗಳನ್ನು ರಚನೆಯಿಂದ ತೆಹೊರತೆಗೆಯಲು ಮತ್ತು ಅವುಗಳನ್ನು ಪೂಜಿಸಬಹುದಾದ ಸ್ಥಳದಲ್ಲಿ ಸ್ಥಾಪಿಸಲು ಒತ್ತಾಯಪಡಿಸಿವೆ.
Delhi | Members of Hindu organisation Mahakal Manav Sewa protest near Qutub Minar, demand renaming of Qutub Minar as Vishnu Stambh pic.twitter.com/HuPsf6oakP
— ANI (@ANI) May 10, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.