ಕೊಲ್ಲಂ: ಧಾರ್ಮಿಕ ಅಸಹಿಷ್ಣುತೆಯ ಆಘಾತಕಾರಿ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. ಇತ್ತೀಚೆಗೆ ಇಸ್ಲಾಂ ಮತವನ್ನು ತ್ಯಜಿಸಿರುವ 24 ವರ್ಷದ ಅಸ್ಕರ್ ಅಲಿ ಎಂಬ ಯುವಕನನ್ನು ಕೊಲ್ಲಂನಲ್ಲಿ ಆತನದ್ದೆ ಸಮುದಾಯದ ಹತ್ತು ಸದಸ್ಯರ ತಂಡವು ಅಪಹರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮೇ 1 ರಂದು ಕೊಲ್ಲಂನಲ್ಲಿ ಅಸ್ಕರ್ ಅಲಿ ಅವರು ‘Those who consume religion’ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಟಿದ್ದಾಗ ಈ ಘಟನೆ ನಡೆದಿದೆ. ಆ ಕಾರ್ಯಕ್ರಮದಲ್ಲಿ ಇಸ್ಲಾಂ ಮತವನ್ನು ತಿರಸ್ಕರಿಸಿದ ಕಾರಣಗಳನ್ನು ಬಹಿರಂಗಪಡಿಸಲು ಆತ ಸಿದ್ಧನಾಗಿದ್ದ. ಇದನ್ನು ತಡೆಯುವ ಸಲುವಾಗಿ ಆತನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಮಲಪ್ಪುರಂ ಮೂಲದ ಅಸ್ಕರ್ ಅಲಿ ನೀಡಿದ ದೂರಿನ ಮೇರೆಗೆ ಕೊಲ್ಲಂ ಪೊಲೀಸರು ಆತನ ಸಂಬಂಧಿಕರು ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಮೇ 1 ರಂದು ಆತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಲಪ್ಪುರಂನ ಜನರ ಗುಂಪೊಂದು ಆತನನ್ನು ಅಪಹರಿಸಲು ಪ್ರಯತ್ನಿಸಿದೆ. “ಅವರು ನನ್ನನ್ನು ಕೊಲ್ಲಂ ಬೀಚ್ಗೆ ಕರೆದೊಯ್ದರು, ಅಲ್ಲಿ ನನ್ನನ್ನು ಕೊಲ್ಲುವ ಪ್ರಯತ್ನ ನಡೆಯಿತು. ಅವರು ನನ್ನ ಮೊಬೈಲ್ ಫೋನ್ ಅನ್ನು ನಾಶಪಡಿಸಿದರು ಮತ್ತು ನನ್ನ ಬಟ್ಟೆಗಳನ್ನು ಹರಿದು ಹಾಕಿದರು. ಅವರು ನನ್ನನ್ನು ಬಲವಂತವಾಗಿ ವಾಹನದೊಳಗೆ ದೂಡಿ ಲಾಕ್ ಮಾಡಲು ಪ್ರಯತ್ನಿಸಿದರು. ಸ್ಥಳೀಯರ ನೆರವಿನಿಂದ ಪೊಲೀಸರು ನನ್ನನ್ನು ರಕ್ಷಿಸಿದರು” ಎಂದು ಆತನ ಹೇಳಿದ್ದಾನೆ.
ಅಸ್ಕರ್ ಅಲಿ ಇತ್ತೀಚಿಗೆ ಹೇಳಿಕೆ ನೀಡಿ, ಭಾರತೀಯ ಸೇನೆಗೆ ಸೇರಬೇಡ, ಸೇನೆಯಲ್ಲಿ ನಮ್ಮವರ (ಮುಸ್ಲಿಮರು) ವಿರುದ್ಧವೇ ನಾವು ಹೋರಾಡಬೇಕಾಗುತ್ತದೆ ಎಂದು ನನಗೆ ತಿಳಿಸಿದ್ದರು ಎಂದಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.