ಅನಂತ್ನಾಗ್: ಕಣಿವೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವದ ಪುರಾತನ ತಾಣಗಳನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಅನಂತ್ನಾಗ್ನ ಮಾರ್ತಾಂಡ ಸೂರ್ಯ ದೇವಸ್ಥಾನದಲ್ಲಿ ನಡೆದ ‘ನವಗ್ರಹ ಅಷ್ಟಮಂಗಲ ಪೂಜೆ’ಯಲ್ಲಿ ಪಾಲ್ಗೊಂಡಿದ್ದ ಅವರು ಈ ಹೇಳಿಕೆ ನೀಡಿದ್ದಾರೆ.
“ಅನಂತನಾಗ್ನ ಮಟ್ಟಾನ್ನ ಮಾರ್ತಾಂಡ ಸೂರ್ಯ ದೇವಾಲಯದಲ್ಲಿ ನವಗ್ರಹ ಅಷ್ಟಮಂಗಲ ಪೂಜೆಯಲ್ಲಿ ಭಾಗವಹಿಸಿದೆ. ದೈವಿಕ ವಾತಾವರಣದಲ್ಲಿ ದೈವಿಕ ಅನುಭವ ಸಿಕ್ಕಿತು” ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಟ್ವೀಟ್ ಮಾಡಿದೆ.
“ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪುರಾತನ ತಾಣಗಳನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸರ್ಕಾರವು ಬದ್ಧವಾಗಿದೆ, ಅವುಗಳನ್ನು ಅಮೋಘ ಕೇಂದ್ರಗಳಾಗಿ ಪರಿವರ್ತಿಸುವುದರಿಂದ ನಮಗೆ ಸದಾಚಾರದ ಹಾದಿಯಲ್ಲಿ ಮಾರ್ಗದರ್ಶನ ಸಿಗುತ್ತದೆ ಮತ್ತು ಈ ಸುಂದರ ಭೂಮಿಯು ಶಾಂತಿ, ಸಂತೋಷ ಮತ್ತು ಸಮೃದ್ಧಿಯಿಂದ ಆಶೀರ್ವದಿಸುತ್ತದೆ” ಎಂದಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಟ್ಟನ್ನಲ್ಲಿರುವ ಪ್ರಸಿದ್ಧ ಮಾರ್ತಾಂಡ ಸೂರ್ಯ ದೇವಾಲಯದಲ್ಲಿ ನಡೆದ ವಿಶೇಷ ನವಗ್ರಹ ಅಷ್ಟಮಂಗಲ ಪೂಜೆ ನಡೆಯಲ್ಲಿ ದೇಶದ ವಿವಿಧ ರಾಜ್ಯಗಳ ಹಿಂದೂ ಪುರೋಹಿತರು ಭಾಗವಹಿಸಿದ್ದರು.
ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಸುರೀಂದರ್ ಅಂಬರದಾರ್, “ಈ ಹಿಂದೆ ಧ್ಯಾನ ಮಾಡಲು ಇಲ್ಲಿಗೆ ಬರುತ್ತಿದ್ದ ಮಹಾತ್ಮರು ಮತ್ತು ಧಾರ್ಮಿಕ ಸಂತರು ಮತ್ತು ಅವರ ಸಂಪ್ರದಾಯಗಳನ್ನು ಮುಂದುವರಿಸಲಾಗುತ್ತಿದೆ. ಈ ಪೂಜೆಯು ವಿಶ್ವಶಾಂತಿಗಾಗಿ, ಭಾರತದ ಶಾಂತಿಗಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದ ಶಾಂತಿಗಾಗಿ ನಡೆದಿದೆ. ಕಾಶ್ಮೀರದಲ್ಲಿ, ಅನೇಕ ದೇವಾಲಯಗಳನ್ನು ಒಡೆಯಲಾಯಿತು ಹೀಗಾಗಿ ದೇವರುಗಳು ನಮ್ಮ ಮೇಲೆ ಕೋಪಗೊಂಡಿದ್ದಾರೆ. ಆದ್ದರಿಂದ ಅವರನ್ನು ಸಂತೋಷಪಡಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಭಾರತದಲ್ಲಿ ಶಾಂತಿ ನೆಲೆಸುತ್ತದೆ” ಎಂದಿದ್ದಾರೆ.
ಮಾರ್ತಾಂಡ್ ಸೂರ್ಯ ದೇವಾಲಯವು ದಕ್ಷಿಣ ಕಾಶ್ಮೀರದ ಅನಂತನಾಗ್ ನಗರದ ಸಮೀಪದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಕ್ರಿ.ಶ ಎಂಟನೇ ಶತಮಾನದಷ್ಟು ಹಿಂದಿನದು ಮತ್ತು ಸೂರ್ಯನಿಗೆ ಇದು ಸಮರ್ಪಿತವಾಗಿದೆ. ಸೂರ್ಯನನ್ನು ಸಂಸ್ಕೃತ ಭಾಷೆಯಲ್ಲಿ ಮಾರ್ತಾಂಡ ಎಂದೂ ಕರೆಯುತ್ತಾರೆ.
ಬಹಳ ದಿನಗಳ ನಂತರ ಈ ದೇವಾಲಯದಲ್ಲಿ ಈ ರೀತಿಯ ವಿಶೇಷ ಪೂಜೆ ನಡೆದಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.