ನವದೆಹಲಿ: ಸಂಸ್ಕೃತವು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಾಧನವಾಗಿದೆ ಮತ್ತು ನರೇಂದ್ರ ಮೋದಿ ಸರ್ಕಾರವು ಭಾಷೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಸಂಸ್ಕೃತ ಭಾಷೆಯನ್ನು ದೇಶಾದ್ಯಂತ ಮತ್ತು ಅದರಾಚೆಗೆ ಪ್ರಚಾರ ಮಾಡಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ನವದೆಹಲಿಯಲ್ಲಿ ಆಯೋಜಿಸಿದ್ದ ಉತ್ಕರ್ಷ್ ಮಹೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಬಿಜೆಪಿ ಅಧ್ಯಕ್ಷರು ಮಾತನಾಡಿದರು.
ವಿಜ್ಞಾನ, ಗಣಿತ ಮತ್ತು ತತ್ವಶಾಸ್ತ್ರದಂತಹ ವಿವಿಧ ವಿಭಾಗಗಳು ಸಂಸ್ಕೃತ ಭಾಷೆಯಲ್ಲಿ ಬೇರುಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
“ವಿಜ್ಞಾನ, ಗಣಿತ ಮತ್ತು ತತ್ವಶಾಸ್ತ್ರದ ಬೇರುಗಳು ಸಂಸ್ಕೃತದಲ್ಲಿವೆ. ಇದು ಕೇವಲ ಭಾಷೆಯಾಗಿರದೆ ಸಮಾಜದ ವಿವಿಧ ಆಯಾಮಗಳಲ್ಲಿ ಪ್ರಗತಿ ಸಾಧಿಸುವ ಮಾರ್ಗವಾಗಿದೆ ಮತ್ತು ನಮ್ಮ ಪ್ರಾಚೀನ ಜ್ಞಾನದ ಬ್ಯಾಂಕ್ ಆಗಿದೆ. ಆದ್ದರಿಂದ ಅದನ್ನು ಸಂರಕ್ಷಿಸಬೇಕಾಗಿದೆ” ಎಂದು ನಡ್ಡಾ ಹೇಳಿದ್ದಾರೆ.
ಸಂಸ್ಕೃತ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ಶ್ರಮಿಸುವವರಿಗೆ ಬಿಜೆಪಿ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು. ಭಾಷೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದಿದ್ದಾರೆ.
“ನಮ್ಮ ಸರ್ಕಾರವು ಸ್ಪಂದಿಸುವ ಸರ್ಕಾರವಾಗಿದೆ. ಭಾಷೆಯನ್ನು ಉತ್ತೇಜಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಶಿಕ್ಷಣವು ಯಾವುದೇ ಎಚ್ಚರ ಮತ್ತು ಜೀವಂತ ಸಮಾಜದ ಪ್ರಮುಖ ವಿಭಾಗವಾಗಿದೆ” ಎಂದು ನಡ್ಡಾ ಹೇಳಿದರು.
ಸಂಸ್ಕೃತ ಎಲ್ಲಿದೆಯೋ ಅಲ್ಲಿ ಸುಸಂಸ್ಕೃತ ಸಮಾಜವಿರುತ್ತದೆ ಎಂದಿದ್ದಾರೆ.
ಇತಿಹಾಸದ ಅತ್ಯಂತ ಹಳೆಯ ಪುಸ್ತಕ ಋಗ್ವೇದವನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಅದು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.