ಚೆನ್ನೈ : ತಮಿಳುನಾಡಿನ ಡಿಎಂಕೆ ಸರ್ಕಾರವು ಧರ್ಮಪುರಂ ಅಧೀನಂನ ಮಠದ ಮುಖ್ಯಸ್ಥರನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ಯುವ ಆಚರಣೆಯಾದ ‘ಪಟ್ಟಿನ ಪ್ರವೇಶಂ’ ಅನ್ನು ನಿಷೇಧಿಸಿದೆ. ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ ಮತ್ತು ಇದನ್ನು ರಾಜಕೀಯ ನಡೆ ಎಂದು ಬಣ್ಣಿಸಿದೆ.
ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ನಿಷೇಧದ ಹಿಂದೆ ರಾಜಕೀಯ ಅಡಗಿದ್ದು, ಜನಸಾಮಾನ್ಯರೂ ಇದನ್ನು ಪ್ರಶ್ನಿಸುತ್ತಿದ್ದಾರೆ. ಡಿಎಂಕೆ ಸಿದ್ಧಾಂತ ಹುಟ್ಟುವ ಮೊದಲೇ ಧರ್ಮಪುರಂ ಅಧೀನಂ ಅಸ್ತಿತ್ವದಲ್ಲಿದ್ದು, ಇದಕ್ಕೆ ಬಿಜೆಪಿ ಪಕ್ಷ ತನ್ನೆಲ್ಲ ಬೆಂಬಲ ನೀಡಲಿದೆ ಎಂದಿದ್ದಾರೆ.
ಏಪ್ರಿಲ್ 27 ರಂದು, ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಧರ್ಮಪುರಂ ಅಧೀನಂನ ಮಠದ ಮುಖ್ಯಸ್ಥರನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿ ಕೊಂಡೊಯ್ಯುವ ಆಚರಣೆಯನ್ನು ಮೈಲಾಡುತುರೈ ಕಂದಾಯ ವಿಭಾಗಾಧಿಕಾರಿ (RDO) ಆರ್.ಬಾಲಾಜಿ ನಿಷೇಧಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದವನ್ನು ಹುಟ್ಟು ಹಾಕಿದೆ.
‘ಪಟ್ಟಿನ ಪ್ರವೇಶಂ’ ನಡೆಸಲು ಬಿಜೆಪಿ ಮುಂಚೂಣಿಯಲ್ಲಿರಲಿದೆ ಎಂದು ಹೇಳಿರುವ ಅಣ್ಣಾಮಲೈ, ಮಠಾಧೀಶರನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ಯಲು ಖುದ್ದು ಸಿದ್ಧರಿರುವುದಾಗಿ ಹೇಳಿದ್ದಾರೆ.
ಡಿಎಂಕೆ ಸರ್ಕಾರದ ನಿರ್ಧಾರವನ್ನು ವೈಷ್ಣವ ಧರ್ಮ ಗುರು ಮನ್ನಾರ್ಗುಡಿ ಶ್ರೀ ಸೆಂದಲಂಗರ ಜೀಯರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ”ತಮಿಳುನಾಡಿನ ಈ ಧರ್ಮದ್ರೋಹಿ ಮತ್ತು ದೇಶದ್ರೋಹಿ ಸರಕಾರ ಹಿಂದೂ ವಿರೋಧಿ ಕೆಲಸಗಳನ್ನು ಮಾಡುತ್ತಿದೆ, ಹಿಂದೂ ನಂಬಿಕೆಗಳು ಮತ್ತು ದೇವಾಲಯಗಳ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಹಿಂದೂಗಳಿಂದ ಬಲವಾದ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.