ನವದೆಹಲಿ: ಮಹಾನ್ ದಾರ್ಶನಿಕ, ಆಧ್ಯಾತ್ಮ ಗುರು ಬಸವಣ್ಣನವರ ಸ್ಮರಣಾರ್ಥ ಪ್ರತಿ ವರ್ಷ ‘ಬಸವ ಜಯಂತಿ’ ಆಚರಿಸಲಾಗುತ್ತದೆ. ಬಸವಣ್ಣನವರ ಜೀವನ ಮತ್ತು ಕಾರ್ಯವನ್ನು ಅರಿತುಕೊಂಡವರಿಗೆ ಅವರ ಪ್ರತಿಯೊಂದು ವಚನಗಳು ದೈನಂದಿನ ಜೀವನಕ್ಕೆ ಬೆಳಕು ನೀಡುತ್ತವೆ. ಬಸವಣ್ಣನವರು ತಮ್ಮ ವಚನಗಳ ಮೂಲಕ ಜೀವನ ಮತ್ತು ಕೆಲಸದ ವಿವಿಧ ಅಂಶಗಳ ಬಗ್ಗೆ ತಾತ್ವಿಕ ಒಳನೋಟಗಳನ್ನು ಒದಗಿಸಿದ ಭಾರತದ ಅಗ್ರಗಣ್ಯ ಆಧ್ಯಾತ್ಮ ಗುರುಗಳಲ್ಲಿ ಒಬ್ಬರು. ಅವರ ಬೋಧನೆಗಳು ಜಾತಿಗಳು, ಪಂಗಡಗಳು ಅಥವಾ ಧರ್ಮಗಳನ್ನು ಮೀರಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮಹಾನ್ ಸಂತನಿಗೆ ಗೌರವಗಳನ್ನು ಅರ್ಪಣೆ ಮಾಡಿದ್ದಾರೆ.
“ಬಸವ ಜಯಂತಿಯ ಈ ಶುಭಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ. ಜಗಜ್ಯೋತಿ ಬಸವೇಶ್ವರರ ಕುರಿತು 2020ರಲ್ಲಿ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿರುವೆ” ಎಂದು ಟ್ವಿಟ್ ಮಾಡಿ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಬಸವ ಜಯಂತಿಯ ಈ ಶುಭಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ. ಜಗಜ್ಯೋತಿ ಬಸವೇಶ್ವರರ ಕುರಿತು 2020ರಲ್ಲಿ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿರುವೆ.https://t.co/RMDe2bTiMD
— Narendra Modi (@narendramodi) May 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.