ಬೆಂಗಳೂರು: ಕಂದಾಯ ಇಲಾಖೆಯು ‘ಸ್ವಾವಲಂಬಿ ಆ್ಯಪ್’ ಅನ್ನು ಪರಿಚಯಿಸಿದೆ. ಈ ಆ್ಯಪ್ ಭೂಮಾಲೀಕರಿಗೆ ತಮ್ಮ ಜಮೀನಿನ ಸ್ವಯಂ ಸರ್ವೇ ಸಿದ್ಧಪಡಿಸಿಕೊಳ್ಳುವ ಅವಕಾಶ ನೀಡಲಿದೆ. ಇದರಿಂದಾಗಿ ಜಮೀನು ಸರ್ವೇಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಸಮಸ್ಯೆಗಳು ಬಗೆಹರಿಯಲಿದೆ.
ಸಾವಲಂಬಿ ಆ್ಯಪ್ ಬಳಸಿ ನಾಗರಿಕರು ಪಹನಿ ಹೊಂದಿರುವ ಜಮೀನಿನಲ್ಲಿ 11ಇ, ನೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಬಹುದು. ಏಕ ಮಾಲೀಕತ್ವ ಪಹಣಿ ಹೊಂದಿರುವವರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ನಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ತನ್ನ ಜಮೀನಿನಲ್ಲಿ 11ಇ, ಪೋಡಿ, ವಿಭಜನೆ ಪರಿವರ್ತನೆಗಾಗಿ ತನ್ನದೇ ಸ್ವಂತ ಸ್ಕೆಚ್ ಮಾಡಿಕೊಳ್ಳಲು ಅವಕಾಶವಿದೆ.
ಮೋಜಣಿ ವ್ಯವಸ್ಥೆಯಡಿ ಇ-ಸಹಿ ಅಥವಾ ಆಧಾರ್ ಕೆವೈಸಿ ಪ್ರಕ್ರಿಯೆನ್ನು ಬಳಸಿಕೊಂಡು ತನ್ನ ಗುರುತನ್ನು ದೃಢೀಕರಿಸಿ ಸಲ್ಲಿಸಬೇಕು. ಈ ವೇಳೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ.
ಬಹು ಮಾಲೀಕತ್ವದ ಪಹಣಿಯ ಒಬ್ಬ ಹಕ್ಕುದಾರರು ಸ್ಕೆಚ್ ಕೋರಿ ಮೋಜಿಣಿ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲಿಗೆ ಪೋಡಿಗೆ ಅರ್ಜಿ ಪರಿಗಣಿಸಲಾಗುವುದು. ಪೋಡಿ ಕೆಲಸ ಪೂರೈಸಿದ ನಂತರ ಅರ್ಜಿಯಂತೆ ನಕ್ಷೆ ಒದಗಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.