ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದೆಹಲಿಯ ತಮ್ಮ ನಿವಾಸದಲ್ಲಿ ದೇಶಾದ್ಯಂತದ ಪ್ರಮುಖ ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿದರು. ವಿವಿಧ ವಿಷಯಗಳ ಕುರಿತು ನಿಯೋಗದೊಂದಿಗೆ ಪ್ರಧಾನಮಂತ್ರಿಯವರು ಮುಕ್ತ ಸಂವಾದ ನಡೆಸಿದರು.
ರೈತ ಕಲ್ಯಾಣ, ಯುವ ಸಬಲೀಕರಣ, ಮಾದಕ ದ್ರವ್ಯ ಮುಕ್ತ ಸಮಾಜ, ರಾಷ್ಟ್ರೀಯ ಶೈಕ್ಷಣಿಕ ನೀತಿ, ಕೌಶಲ್ಯ, ಉದ್ಯೋಗ, ತಂತ್ರಜ್ಞಾನ ಮತ್ತು ಪಂಜಾಬ್ನ ಒಟ್ಟಾರೆ ಅಭಿವೃದ್ಧಿ ಸಂವಾದದ ಪ್ರಮುಖ ಅಂಶಗಳಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬುದ್ಧಿಜೀವಿಗಳು ಸಮಾಜದ ಅಭಿಪ್ರಾಯ ರೂಪಿಸುವವರು ಎಂದ ಪ್ರಧಾನಿ, ನಿಯೋಗದ ಸದಸ್ಯರು ಸಾರ್ವಜನಿಕರೊಂದಿಗೆ ತೊಡಗಿಸಿಕೊಂಡು ಶಿಕ್ಷಣ ನೀಡಲು ಮತ್ತು ನಾಗರಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕೆಲಸ ಮಾಡಬೇಕು ಒತ್ತಾಯಿಸಿದರು. ಅಲ್ಲದೇ, ದೇಶದ ವಿಶಾಲ ಮತ್ತು ಸುಂದರವಾದ ವೈವಿಧ್ಯತೆಯ ನಡುವೆಯೂ ಕೇಂದ್ರ ಸ್ತಂಭವಾಗಿ ಕಾರ್ಯನಿರ್ವಹಿಸುವ ಏಕತೆಯ ಮನೋಭಾವದ ಮಹತ್ವವನ್ನು ಒತ್ತಿ ಹೇಳಿದರು.
ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣವು ನಿಜವಾಗಲು ಭಾರತೀಯ ಭಾಷೆಗಳಲ್ಲಿ ವೃತ್ತಿಪರ ಕೋರ್ಸ್ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತದೆ ಎಂದು ಮೋದಿ ಹೇಳಿದರು.
ನಿಯೋಗವು ಅವರಿಗೆ ಆಹ್ವಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿತು ಮತ್ತು ಪ್ರಧಾನಿಯವರು ತಮ್ಮೊಂದಿಗೆ ಇಂತಹ ಅನೌಪಚಾರಿಕ ಸನ್ನಿವೇಶದಲ್ಲಿ ತೊಡಗುತ್ತಾರೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದರು. ಸಿಖ್ ಸಮುದಾಯದ ಒಳಿತಿಗಾಗಿ ಪ್ರಧಾನಮಂತ್ರಿಯವರು ಕೈಗೊಂಡಿರುವ ನಿರಂತರ ಮತ್ತು ಬಹು ಕ್ರಮಗಳನ್ನು ಅವರು ಶ್ಲಾಘಿಸಿದರು.
.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.