ವಿಶ್ವಸಂಸ್ಥೆ: ಉಕ್ರೇನ್ ರಾಷ್ಟ್ರದಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿಲ್ಲ ಎಂದು ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡನೆ ಮಾಡಿದ ನಿರ್ಣಯದಿಂದ ಭಾರತ ದೂರ ಉಳಿಯುವ ಮೂಲಕ ತಟಸ್ಥ ಧೋರಣೆಯನ್ನು ಅನುಸರಿಸಿದೆ.
ಚೀನಾ ರಷ್ಯಾದ ಪರವಾಗಿ ಮತ ಚಲಾವಣೆ ಮಾಡಿದೆ. ಆದರೆ ಭಾರತ ಸೇರಿದಂತೆ 12 ರಾಷ್ಟ್ರಗಳು ತಟಸ್ಥ ಧೋರಣೆ ಅನುಸರಿಸಿ ನಿರ್ಣಯದ ಪರ ಅಥವಾ ವಿರುದ್ಧ ಮತ ಚಲಾವಣೆ ಮಾಡಿಲ್ಲ. ಹೀಗಾಗಿ ರಷ್ಯಾದ ನಿರ್ಣಯಕ್ಕೆ ಸೋಲಾಗಿದೆ.
ರಷ್ಯಾದ ಪರವಾಗಿ 9 ದೇಶಗಳು ಮತ ಹಾಕುವ ಅಗತ್ಯವಿತ್ತು, ಆದರೆ ರಷ್ಯಾ ಈ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಕೇವಲ ರಷ್ಯಾ ಮತ್ತು ಚೀನಾ ಮಾತ್ರ ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿವೆ. ನಿರ್ಣಯದ ವಿರುದ್ಧ ಕೂಡ ಯಾವ ದೇಶವೂ ಮತ ಹಾಕಿಲ್ಲ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ 4 ವಾರಗಳು ಕಳೆದಿವೆ. ಆದರೂ ಇದುವರೆಗೆ ರಷ್ಯಾ ತನ್ನ ಗುರಿ ಸಾಧಿಸುವ ಕಾರ್ಯದಲ್ಲಿ ಸಫಲವಾಗಿಲ್ಲ. ಈಗಲೂ ರಷ್ಯಾವು ಉಕ್ರೇನ್ನ ಹಲವು ನಗರಗಳ ಮೇಲೆ ನಿರಂತರವಾಗಿ ಬಾಂಬ್ ಮತ್ತು ಶೆಲ್ ದಾಳಿಗಳನ್ನು ನಡೆಸುತ್ತಿದೆ. ಈ ನಗರದಲ್ಲಿ ಸುಮಾರು 1 ಲಕ್ಷ ಜನರು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಹಸಿವಿನಲ್ಲಿ ನರಳುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರು ಆರೋಪ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.