ನವದೆಹಲಿ: ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಎದುರಿಸಿದ್ದ ನೈಜ ಹಿಂಸಾಚಾರ ಮತ್ತು ಕಿರುಕುಳವು ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದಲ್ಲಿ ತೋರಿಸಿದ್ದಕ್ಕಿಂತ ಭಯಾನಕವಾಗಿದೆ ಎಂದು 1990 ರ ದಶಕದ ಆರಂಭದಲ್ಲಿ ಕಣಿವೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಐಪಿಎಸ್ ಅಧಿಕಾರಿ ಡಾ ಎನ್ಸಿ ಅಸ್ಥಾನಾ ಹೇಳಿದ್ದಾರೆ.
ಅಧಿಕೃತ ರಹಸ್ಯ ಕಾಯಿದೆಗೆ ಬದ್ಧರಾಗಿರುವ ಕಾರಣ ನಿಖರವಾದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
“ಸೆನ್ಸಾರ್ ಮಂಡಳಿ ಅನುಮೋದಿಸಿದ ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಯಾವುದೇ ಆಕ್ಷೇಪ ಇರುವವರು ಇದನ್ನು ಬಹಿಷ್ಕರಿಸಲು ಅಥವಾ ಅದನ್ನು ನಿರಾಕರಿಸುವ ಮತ್ತೊಂದು ಚಲನಚಿತ್ರವನ್ನು ಮಾಡಲು ಸ್ವತಂತ್ರರು. ಆದರೆ, ನಾನು 1990 ರ ದಶಕದ ಆರಂಭದಿಂದಲೂ ಕಾಶ್ಮೀರದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಸ್ಥಾನಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಸಿನಿಮಾದಲ್ಲಿ ತೋರಿಸಿದ್ದಕ್ಕಿಂತ ಸತ್ಯವು ಹೆಚ್ಚು ಭಯಾನಕವಾಗಿದೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.
“ಕೆಲವರನ್ನು ಹೊರತುಪಡಿಸಿ, ಆ ಕಾಲದ ನನ್ನ ಹೆಚ್ಚಿನ ಸಹೋದ್ಯೋಗಿಗಳು ಇನ್ನೂ ಜೀವಂತವಾಗಿದ್ದಾರೆ. ನಾವೆಲ್ಲರೂ ಅಧಿಕೃತ ರಹಸ್ಯ ಕಾಯಿದೆಗೆ ಬದ್ಧರಾಗಿದ್ದೇವೆ. ಇದು ಆಡಳಿತದ ದುರಂತ” ಎಂದು ಅವರು ಹೇಳಿದ್ದಾರೆ.
1990 ರ ದಶಕದ ಆರಂಭದಲ್ಲಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ ಕಾಶ್ಮೀರ್ ಫೈಲ್ಸ್ ಚಲನಚಿತ್ರವು ಮಾರ್ಚ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಾಶ್ಮೀರ ಹತ್ಯಾಕಾಂಡದ ಸತ್ಯವನ್ನು ತೋರಿಸಿದ್ದಕ್ಕಾಗಿ ಚಿತ್ರವು ಎಡಪಂಥೀಯರು ಮತ್ತು ಇಸ್ಲಾಂ ಮೂಲಭೂತವಾದಿಗಳ ಆಕ್ರೋಶ ಎದುರಿಸುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳು ಚಿತ್ರದ ನಿರ್ಮಾಣ ಮತ್ತು ಬಿಡುಗಡೆಯನ್ನು ಸ್ಥಗಿತಗೊಳಿಸಲು ಹಲವು ಪ್ರಯತ್ನಗಳನ್ನು ಮಾಡಿದವು. ಆದರೆ ಯಶಸ್ಸನ್ನು ಕಾಣಲಿಲ್ಲ.
1990ರ ನಂತರವೂ ಕಾಶ್ಮೀರಿ ಹಿಂದೂಗಳ ನರಮೇಧ ನಿಲ್ಲಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹತ್ಯಾಕಾಂಡ ಮುಂದುವರಿದಿದೆ ಎಂದು ಡಾ.ಅಸ್ಥಾನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.