ನವದೆಹಲಿ: ಆರು ತಿಂಗಳೊಳಗೆ 25 ಕೋಟಿ ಅಸಂಘಟಿತ ಕಾರ್ಮಿಕರು “ಇ-ಶ್ರಮ್” ಪೋರ್ಟಲ್ನಲ್ಲಿ ನೋಂದಣಿಯನ್ನು ಮಾಡಿಕೊಂಡಿದ್ದು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಈ ಸಾಧನೆಯನ್ನು ಸಂಭ್ರಮಿಸಿದೆ.
ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು, ಇತ್ತೀಚೆಗೆ ಪ್ರಾರಂಭಿಸಲಾದ ಪೋರ್ಟಲ್ “ಸಬ್ಕಾ ಸಾಥ್ – ಸಬ್ಕಾ ವಿಕಾಸ್ – ಸಬ್ಕಾ ವಿಶ್ವಾಸ್ – ಸಬ್ಕಾ ಪ್ರಯಾಸ್” ಧ್ಯೇಯವಾಕ್ಯವನ್ನು ಪೂರೈಸುವ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.
ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 25 ಕೋಟಿ ನೋಂದಣಿಯ ಮೈಲಿಗಲ್ಲು ಸಾಧಿಸಿರುವುದು ಸಾಮೂಹಿಕ ಇಚ್ಛಾಶಕ್ತಿಯ ಶಕ್ತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಮುಂಬರುವ ದಿನಗಳಲ್ಲಿ ಇಶ್ರಮ್ ಪೋರ್ಟಲ್ “ಅಮೃತ್ ಕಾಲ್ ಫಾರ್ ಗರೀಬ್ ಕಲ್ಯಾಣ್”ಗೆ ಅಡಿಪಾಯವನ್ನು ಒದಗಿಸಲಿದೆ, ಇದರ ಆಧಾರದ ಮೇಲೆ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳು ದೇಶದ ಅಸಂಘಟಿತ ಕಾರ್ಮಿಕರಿಗೆ ನೇರ ಪ್ರಯೋಜನಗಳನ್ನು ಒದಗಿಸುತ್ತ ಎಂದು ಯಾದವ್ ಹೇಳಿದರು.
ಇ-ಶ್ರಮ್ ಪೋರ್ಟಲ್ ಅನ್ನು ಈಗ ಉಮಾಂಗ್ ಮೊಬೈಲ್ ಅಪ್ಲಿಕೇಶನ್ನಲ್ಲಿಯೂ ಲಭ್ಯಗೊಳಿಸಲಾಗಿದೆ, ಇದರ ಮೂಲಕ ಅಸಂಘಟಿತ ಕಾರ್ಮಿಕರು ಸುಲಭವಾಗಿ ನೋಂದಾಯಿಸಿಕೊಳ್ಳಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.