ನವದೆಹಲಿ: ಯುದ್ಧ ಪೀಡಿತ ದೇಶವಾದ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ‘ಆಪರೇಷನ್ ಗಂಗಾ’ಗೆ ಭಾರತೀಯ ವಾಯುಪಡೆಯು C-17 ಸಾರಿಗೆ ವಿಮಾನವನ್ನು ನಿಯೋಜಿಸುತ್ತಿದೆ.
ಉಕ್ರೇನ್ನಿಂದ ಭಾರತೀಯ ನಾಗರಿಕರನ್ನು ಕರೆತರಲು C-17 ಬುಧವಾರ ಮುಂಜಾನೆ 4 ಗಂಟೆಗೆ ರೊಮೇನಿಯಾಗೆ ತೆರಳಲಿದೆ ಎಂದು ಐಎಎಫ್ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಸರಿಸುಮಾರು 300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ C-17 ವಿಮಾನವು ದೆಹಲಿಯ ಬಳಿಯ ಹಿಂಡಾನ್ನಲ್ಲಿರುವ ತನ್ನ ಮೂಲ ನೆಲೆಯಿಂದ ಟೇಕ್ ಆಫ್ ಆಗಿದೆ.
ನಿನ್ನೆ, ಪ್ರಧಾನಿ ಮೋದಿ ಅವರು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾಗೆ ಸೇರುವಂತೆ ಭಾರತೀಯ ವಾಯುಸೇನೆಗೆ ಕೇಳಿಕೊಂಡಿದ್ದರು.
ಸುದ್ದಿಯನ್ನು ಖಚಿತಪಡಿಸಿದ್ದ ವಿದೇಶಾಂಗ ಕಾರ್ಯದರ್ಶಿ ಎಚ್ವಿ ಶ್ರಿಂಗ್ಲಾ, “ಭಾರತೀಯರನ್ನು ಮರಳಿ ಕರೆತರಲು C-17 IAF ವಿಮಾನವು ಬುಧವಾರ ಮುಂಜಾನೆ 4 ಗಂಟೆಗೆ ರೊಮೇನಿಯಾಕ್ಕೆ ಹಾರುವ ನಿರೀಕ್ಷೆಯಿದೆ ಎಂದಿದ್ದರು. “ಮುಂದಿನ ಮೂರು ದಿನಗಳಲ್ಲಿ, ಭಾರತೀಯ ನಾಗರಿಕರನ್ನು ಮರಳಿ ಕರೆತರಲು 26 ವಿಮಾನಗಳನ್ನು ನಿಗದಿಪಡಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ರಷ್ಯಾದ ಮಿಲಿಟರಿ ಆಕ್ರಮಣದ ನಂತರ ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿರುವುದರಿಂದ, ಇಲ್ಲಿಯವರೆಗೆ, ಖಾಸಗಿ ಭಾರತೀಯ ವಾಹಕಗಳು ಮಾತ್ರ ಪಶ್ಚಿಮ ಭಾಗದಲ್ಲಿ ಉಕ್ರೇನ್ನೊಂದಿಗೆ ಭೂ ಗಡಿ ಹೊಂದಿರುವ ದೇಶಗಳಾದ ರೊಮೇನಿಯಾ ಮತ್ತು ಹಂಗೇರಿಯಿಂದ ಭಾರತೀಯರನ್ನು ಸ್ಥಳಾಂತರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.