ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಇಂದಿನಿಂದ ‘ವಿಜ್ಞಾನ ಸರ್ವತ್ರ ಪೂಜ್ಯತೆ’ ಎಂಬ ಶೀರ್ಷಿಕೆಯ ಒಂದು ವಾರದ ಕಾರ್ಯಕ್ರಮವನ್ನು ದೇಶದಾದ್ಯಂತದ 75 ಸ್ಥಳಗಳಲ್ಲಿ ನಡೆಸುತ್ತಿದೆ.
ಕಾರ್ಯಕ್ರಮವು ಲೇಹ್, ಶ್ರೀನಗರ, ಪೋರ್ಟ್ ಬ್ಲೇರ್, ಲಕ್ಷದ್ವೀಪದ ಕವರಟ್ಟಿ ದ್ವೀಪಗಳಲ್ಲಿ, ಅಹಮದಾಬಾದ್, ದಮನ್, ಇಟಾನಗರ, ಕೊಹಿಮಾ, ಐಜ್ವಾಲ್ ಮುಂತಾದ 75ಗಳಲ್ಲಿ ನಡೆಯಲಿದೆ. ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ರಕ್ಷಣಾ, ಬಾಹ್ಯಾಕಾಶ, ಆರೋಗ್ಯ, ಕೃಷಿ, ಖಗೋಳಶಾಸ್ತ್ರ ಮತ್ತು ಇತರ ಕ್ಷೇತ್ರಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡಿದ ದೇಶದ ವೈಜ್ಞಾನಿಕ ಪರಂಪರೆ ಮತ್ತು ತಂತ್ರಜ್ಞಾನದ ಸಾಧನೆಯನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದ.
ʼವಿಜ್ಞಾನ ಸರ್ವತ್ರ ಪೂಜ್ಯತೆʼ ಕಾರ್ಯಕ್ರಮದ ಕುರಿತು ವಿವರಗಳನ್ನು ನೀಡಿದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ.ಕೆ.ವಿಜಯ್ ರಾಘವನ್, ಕಾರ್ಯಕ್ರಮಗಳನ್ನು ನಾಲ್ಕು ವಿಷಯಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದರು. ಮೊದಲ ವಿಷಯವೆಂದರೆ – ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ. ಇದರಡಿ 75 ವಿಜ್ಞಾನಿಗಳ 75 ಚಲನಚಿತ್ರಗಳ ಪ್ರದರ್ಶನ ಮತ್ತು 75 ಸ್ಥಳಗಳಲ್ಲಿ ಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞರಿಂದ 75 ಉಪನ್ಯಾಸಗಳು ಇರುತ್ತದೆ.
ಎರಡನೆಯ ವಿಷಯವು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೈಲಿಗಲ್ಲುಗಳು, ಮೂರನೆಯದು ಸ್ವದೇಶಿ ಪರಂಪರೆಯ ಆವಿಷ್ಕಾರಗಳು ಮತ್ತು ನಾವೀನ್ಯತೆಗಳು. ನಾಲ್ಕನೇ ವಿಷಯ – ಭಾರತ ಪರಿವರ್ತನೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್ ಮಾತನಾಡಿ, ಈ ಕಾರ್ಯಕ್ರಮವು ಚಿಕ್ಕ ಮಕ್ಕಳಿಗೆ ಮಾತ್ರವಲ್ಲದೆ ಸಾಮಾನ್ಯ ನಾಗರಿಕರಿಗೂ ಪ್ರೇರಣೆ ನೀಡುತ್ತದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿಗಳ ಬಗ್ಗೆ ಜನರಿಗೆ ತಿಳಿಸುತ್ತದೆ ಎಂದಿದ್ದಾರೆ.
ಕಾರ್ಯಕ್ರಮವು ಕಾಶ್ಮೀರಿ, ಡೋಗ್ರಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಬೆಂಗಾಲಿ, ಅಸ್ಸಾಮಿ, ನೇಪಾಳಿ, ಮೈಥಿಲಿ ಮತ್ತು ಮಣಿಪುರ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ನಡೆಯಲಿದೆ ಮತ್ತು 75 ಚಲನಚಿತ್ರಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.