ನವದೆಹಲಿ: ಅಫ್ಘಾನಿಸ್ಥಾನದ ಸಿಖ್ ಮತ್ತು ಹಿಂದೂಗಳ ನಿಯೋಗವು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿತು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ನಿಯೋಗ, ಈ ಕಾಯ್ದೆ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಿದೆ ಎಂದು ಹೇಳಿದೆ
ಹೆಚ್ಚಿನ ಸಂಖ್ಯೆಯ ಅಫಘಾನ್ ಹಿಂದೂಗಳು ಮತ್ತು ಸಿಖ್ಖರು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕೇಂದ್ರ ಸರ್ಕಾರವು ಇತ್ತೀಚೆಗೆ ಅವರಲ್ಲಿ ಅನೇಕರನ್ನು ಸ್ಥಳಾಂತರಿಸಿ ಭಾರತಕ್ಕೆ ಕರೆ ತಂದಿದೆ.
ವಿಶೇಷವಾಗಿ ತಾಲಿಬಾನ್ಗಳಿಂದ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಮೋದಿ ಸರ್ಕಾರವು ರಕ್ಷಣೆ-ಆಶ್ರಯ ಒದಗಿಸುವ ಮೂಲಕ ತನ್ನ ಬದ್ಧತೆಯನ್ನು ಪುನರುಚ್ಛರಿಸಿದೆ.
ಅಫ್ಘಾನ್ ಹಿಂದೂ-ಸಿಖ್ ನಿಯೋಗಕ್ಕೆ ಭಾರತವು ನಿಮ್ಮ ಮನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
“ಭಾರತ ನಿಮ್ಮ ಮನೆ. ನೀವು ನಮಗೆ ಅತಿಥಿಗಳಲ್ಲ ಮತ್ತು ಪ್ರತಿಯೊಬ್ಬ ಭಾರತೀಯರು ನಿಮ್ಮ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ” ಎಂದು ಪ್ರಧಾನಿ ನಿಯೋಗಕ್ಕೆ ಹೇಳಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ನಿಯೋಗದ ಸದಸ್ಯರೊಬ್ಬರು, “ದೇಶದಾದ್ಯಂತ ವಾಸಿಸುವ ಭಾರತೀಯರು ಮತ್ತು ಸಿಖ್ಖರ ನೋವನ್ನು ಮೋದಿ ಮಾತ್ರ ಅರ್ಥಮಾಡಿಕೊಳ್ಳಬಲ್ಲರು. ಎಲ್ಲಿ ಸಮಸ್ಯೆ ಇದ್ದರೂ ಮುಂದೆ ಬಂದು ಸಹಾಯ ಮಾಡುವುದನ್ನು ನಾವು ನೋಡುತ್ತೇವೆ” ಎಂದಿದ್ದಾರೆ.
ನೆರೆಯ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲು ಪ್ರಧಾನಿ ಮೋದಿ ಅವರು ವಿವಿಧ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ನಿಯೋಗದ ಸದಸ್ಯರು ಶ್ಲಾಘಿಸಿದರು.
“ಯಾರೂ ಕೇಳುವವರಿಲ್ಲದಿದ್ದಾಗ, ನೀವು ಮಾತ್ರ ನಮ್ಮ ಮಾತನ್ನು ಕೇಳುತ್ತಿದ್ದಿರಿ. ಸಿಎಎಗಾಗಿ ನಿಮಗೆ ಧನ್ಯವಾದ ಹೇಳಲು ಇಲ್ಲಿ ಸೇರಿದ್ದೇವೆ. ಇದರಿಂದ ಭಾರತದಲ್ಲಿ ನೆಲೆಸಲು ಅವಕಾಶ ಸಿಕ್ಕಿತು” ಎಂದಿದ್ದಾರೆ.
ನಿಯೋಗವು ಪ್ರಧಾನಿ ಮೋದಿಯವರಿಗೆ ಅಫ್ಘಾನ್ ಪೇಟವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.