ನವದೆಹಲಿ: ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಉಡಾನ್ ಯೋಜನೆಯಡಿ ದೆಹಲಿ ಮತ್ತು ಖಜುರಾಹೊ ನಡುವೆ ನೇರ ವಿಮಾನಯಾನವನ್ನು ಉದ್ಘಾಟಿಸಿದರು. ನಿಗದಿತ ಖಜುರಾಹೋ ಉತ್ಸವಕ್ಕೆ ಎರಡು ದಿನ ಮುಂಚಿತವಾಗಿ ವಿಮಾನ ಸೇವೆಯನ್ನು ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮಧ್ಯಪ್ರದೇಶವು ವಿಮಾನಯಾನ ಕ್ಷೇತ್ರದಲ್ಲಿ ಶೇ.40ರಷ್ಟು ಬೆಳವಣಿಗೆ ಕಂಡಿದೆ. ಖಜುರಾಹೊ ಮಧ್ಯಪ್ರದೇಶದ ಸಂಸ್ಕೃತಿಯ ಹೆಬ್ಬಾಗಿಲು ಮತ್ತು ಇದು ಸಾವಿರ ವರ್ಷಗಳ ಹಿಂದಿನ ಹಿಂದೂ ಮತ್ತು ಜೈನ ನಾಗರಿಕತೆಯ ವಿಶಿಷ್ಟ ಸಂಗಮವನ್ನು ಪ್ರತಿನಿಧಿಸುತ್ತದೆ ಎಂದರು.
ಈ ವರ್ಷ ಏಪ್ರಿಲ್ನಿಂದ ಖಜುರಾಹೊದಲ್ಲಿ ಎರಡು ಹಾರಾಟ ತರಬೇತಿ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಅವರು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.