ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರ ರಾಜಧಾನಿ ನವದೆಹಲಿಯ ತಮ್ಮ ನಿವಾಸದಲ್ಲಿ ದೇಶಾದ್ಯಂತ ಇರುವ ಪ್ರಮುಖ ಸಿಖ್ಖರಿಗೆ ಆತಿಥ್ಯ ನೀಡಿದರು.
ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಈ ವಿಡಿಯೋವನ್ನು ಹಂಚಿಕೊಂಡಿದೆ. ಸಿಖ್ಖರು ಪ್ರಧಾನ ಮಂತ್ರಿಗೆ “ಕಿರ್ಪಾನ್” ಅನ್ನು ಪ್ರದಾನಿಸಿದ್ದಾರೆ
ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ, ಪದ್ಮಶ್ರೀ ಬಾಬಾ ಬಲ್ಬೀರ್ ಸಿಂಗ್ ಜಿ ಸಿಚೆವಾಲ್ (ಸುಲ್ತಾನ್ಪುರ್ ಲೋಧಿ), ಮಹಂತ್ ಕರಮ್ಜಿತ್ ಸಿಂಗ್ ಪ್ರಧಾನಿ ಮೋದಿಯವರು ಆತಿಥ್ಯ ವಹಿಸಿದ ಕೆಲವು ಪ್ರಮುಖ ಸಿಖ್ಖರು.
ಇಂದೋರ್ನ ಸಿಂಗ್ ಸಭಾ ಗುರುದ್ವಾರ ಸಾಹಿಬ್ನ ಅಧ್ಯಕ್ಷ ಮಂಜೀತ್ ಸಿಂಗ್ ಭಾಟಿಯಾ ಮಾತನಾಡಿ, “ಪ್ರಧಾನಿ ಮೋದಿ ಅವರು ಸದಾ ಸಿಖ್ ಸಮುದಾಯವನ್ನು ಗೌರವಿಸುತ್ತಾರೆ. ನಮ್ಮ ಸಮುದಾಯ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಸಿಖ್ ಸಮುದಾಯವನ್ನು ಬಲಪಡಿಸಿದ್ದಾರೆ” ಎಂದಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವುದೇ ಪ್ರಧಾನಿ ಮೋದಿಯವರಂತೆ ಸಮುದಾಯಕ್ಕಾಗಿ ಕೆಲಸ ಮಾಡಿಲ್ಲ ಎಂದಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರವರಿ 20 ರಂದು 117 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಡೆಯಲಿದೆ. ಮತಗಳ ಎಣಿಕೆಯು 10 ಮಾರ್ಚ್ 2022 ರಂದು ನಡೆಯಲಿದೆ.
#WATCH | Prime Minister Narendra Modi hosts prominent Sikhs across the country at his residence in Delhi pic.twitter.com/l86E8gJ7uL
— ANI (@ANI) February 18, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.