ನವದೆಹಲಿ: ಭಾರತವು ತನ್ನ ಕೃಷಿ ಮತ್ತು ಆಹಾರ ಸಂಸ್ಕರಣಾ ಸಾಮರ್ಥ್ಯವನ್ನು EXPO2020 ದುಬೈನಲ್ಲಿ ಪ್ರದರ್ಶಿಸುತ್ತಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಇಂದು ʻಎಕ್ಸ್ಪೋ2020 ದುಬೈʼನ ಇಂಡಿಯಾ ಪೆವಿಲಿಯನ್ನಲ್ಲಿ ‘ಆಹಾರ, ಕೃಷಿ ಮತ್ತು ಜೀವನೋಪಾಯ’ ಪಾಕ್ಷಿಕ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ.
ಜಾಗತಿಕ ಆಹಾರ ಸಂಸ್ಕರಣಾ ಉದ್ಯಮಕ್ಕೆ ಆದ್ಯತೆಯ ಪೂರೈಕೆ ಪಾಲುದಾರನಾಗಲು ಭಾರತವು ʻಎಕ್ಸ್ಪೋ 2020 ದುಬೈʼನಲ್ಲಿ ಹದಿನೈದು ದಿನಗಳ ಕಾಲ ವಿಶೇಷ ಪ್ರಯತ್ನಗಳನ್ನು ನಡೆಸಲಿದೆ. ಜೊತೆಗೆ, ಅಂತರರಾಷ್ಟ್ರೀಯ ಸಹಯೋಗಗಳನ್ನು ಅನ್ವೇಷಿಸಲು ಮತ್ತು ಅದರ ರಫ್ತು ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ವಿವಿಧ ವಿಚಾರ ಸಂಕಿರಣಗಳು ಮತ್ತು ಸಮಾವೇಶಗಳನ್ನು ಆಯೋಜಿಸಲಿದೆ ಎಂದು ಮೂಲಗಳು ತಿಳಿಸಿದೆ..
ಆಹಾರ ಸಂಸ್ಕರಣೆ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಸಾವಯವ ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ಹಾಗೂ ಈ ಕ್ಷೇತ್ರಗಳಲ್ಲಿ ಅದು ಒದಗಿಸುವ ಅಗಾಧ ಹೂಡಿಕೆ ಅವಕಾಶಗಳನ್ನು ಈ ಹದಿನೈದು ದಿನಗಳ ಕಾಲ ಪ್ರದರ್ಶಿಸಲಾಗುತ್ತಿದೆ.
ಭಾರತದ ಪ್ರದರ್ಶನದಲ್ಲಿ ‘ಸಿರಿಧಾನ್ಯʼವು ಪ್ರಮುಖ ವಿಷಯವಾಗಿದೆ. ಇದರ ಭಾಗವಾಗಿ ಸಿರಿಧಾನ್ಯಗಳ ಆಹಾರ ಉತ್ಸವ, ಸಿರಿಧಾನ್ಯ ಪುಸ್ತಕದ ಲೋಕಾರ್ಪಣೆ ಮತ್ತು ಸಿರಿಧಾನದ್ಯದ ಆರೋಗ್ಯ ಮತ್ತು ಪೌಷ್ಠಿಕಾಂಶದ ಪ್ರಯೋಜನಗಳ ಮೇಲೆ ಗಮನ ಕೇಂದ್ರೀಕರಿಸುವ ವಿವಿಧ ವಿಚಾರ ಸಂಕಿರಣಗಳಿಗೆ ಈ ಹದಿನೈದು ದಿನಗಳು ಸಾಕ್ಷಿಯಾಗಲಿವೆ. 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಘೋಷಿಸಬೇಕೆಂದು ಭಾರತ ಮುಂದಿಟ್ಟ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇತ್ತೀಚೆಗೆ ಅಂಗೀಕರಿಸಿದ್ದು, ಇದನ್ನು 70ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿವೆ.
ಈ ಹದಿನೈದು ದಿನಗಳ ಕಾರ್ಯಕ್ರಮದಲ್ಲಿ ಭಾರತದ ಹಲವು ಹಿರಿಯ ಸರಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ‘ಆಹಾರ, ಕೃಷಿ ಮತ್ತು ಜೀವನೋಪಾಯ’ ಪಾಕ್ಷಿಕವು ಮಾರ್ಚ್ 2ರಂದು ಕೊನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.