ನವದೆಹಲಿ: ಪುಲ್ವಾಮಾ ದಾಳಿ ನಡೆದ 100 ಗಂಟೆಗಳಲ್ಲಿ ಭದ್ರತಾ ಪಡೆಗಳು ಪುಲ್ವಾಮಾ ದಾಳಿಯ ಹಿಂದಿನ ಭಯೋತ್ಪಾದನಾ ಘಟಕವನ್ನು ನಿರ್ಮೂಲನೆ ಮಾಡಿದೆ ಎಂದು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆಜೆಎಸ್ ಧಿಲ್ಲೋನ್ ಇಂದು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಫೆಬ್ರವರಿ 14, 2019 ರಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿತ್ತು. ಆತ್ಮಾಹುತಿ ಬಾಂಬರ್ ಅನ್ನು ಜೈಶ್-ಎ-ಮೊಹಮ್ಮದ್ನ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಈತ ಸಿಆರ್ಪಿಎಫ್ ಬೆಂಗಾವಲು ಪಡೆಯ ವಾಹನಕ್ಕೆ ತನ್ನ ವಾಹನವನ್ನು ಡಿಕ್ಕಿ ಹೊಡೆಸಿ ಅರೆಸೈನಿಕ ಪಡೆಯ 40 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ.
ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 15 ಕಾರ್ಪ್ಸ್ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆಜೆಎಸ್ ಧಿಲ್ಲೋನ್ ಮಾತನಾಡಿ, “ದಾಳಿ ನಡೆದ 100 ಗಂಟೆಗಳ ಒಳಗೆ ಪಾಕಿಸ್ಥಾನಿ ಪ್ರಜೆ ಕಮ್ರಾನ್ ನೇತೃತ್ವದ ಪುಲ್ವಾಮಾ ದಾಳಿಯ ಹಿಂದಿನ ಘಟಕವನ್ನು ಭದ್ರತಾ ಪಡೆಗಳು ನಿರ್ಮೂಲನೆ ಮಾಡಿವೆ” ಎಂದಿದ್ದಾರೆ.
ಸಿಆರ್ಪಿಎಫ್ ಮೇಲಿನ ದಾಳಿಯ ನಂತರ ಭಾರತೀಯ ಭದ್ರತಾ ಪಡೆಗಳ ಪ್ರತೀಕಾರದ ಕ್ರಮದಿಂದಾಗಿ ಜೆಎಂ ಭಯೋತ್ಪಾದಕರು ತಮ್ಮ ಉಗ್ರ ಸಂಘಟನೆಗಳ ಉಸ್ತುವಾರಿ ವಹಿಸಿಕೊಳ್ಳಲು ಹೆದರುತ್ತಿದ್ದರು ಎಂದು ಅವರು ಹೇಳಿದ್ದಾರೆ.
“ಜೈಶ್-ಎ-ಮೊಹಮ್ಮದ್ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆಯ ನಂತರ, ಭಯೋತ್ಪಾದಕರು ಸಾಯುವ ಭಯದಲ್ಲಿದ್ದರು, ಯಾರೂ ನಾಯಕತ್ವದ ಪಾತ್ರವನ್ನು ತೆಗೆದುಕೊಳ್ಳಲು ಬಯಸುತ್ತಿರಲಿಲ್ಲ. ಪಾಕ್ನಿಂದ ಬರುತ್ತಿದ್ದ ಕರೆಗಳು ಭಯೋತ್ಪಾದಕರಿಗೆ ನಾಯಕತ್ವದ ಪಾತ್ರವನ್ನು ವಹಿಸುವಂತೆ ಮನವಿ ಮಾಡುತ್ತಿದ್ದವು ಆದರೆ ಅವರು ನಿರಾಕರಿಸುತ್ತಿದ್ದರು ”ಎಂದು ಧಿಲ್ಲೋನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.