ಬೆಂಗಳೂರು: ಕೇಂದ್ರದ ಜಲಶಕ್ತಿ ಉಪಕ್ರಮದಡಿ ದಾಖಲೆಯ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಕರ್ನಾಟಕ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ “ಕ್ಯಾಚ್ ದ ರೈನ್’ ಕರೆಗೆ ಅನುಗುಣವಾಗಿ ಆರಂಭಿಸಲಾದ ಅಭಿಯಾನದಡಿ ಇದುವರೆಗೂ 4.87 ಲಕ್ಷ ರೂ. ಮೌಲ್ಯದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲೇ ನಂಬರ್ 1 ಎನಿಸಿಕೊಂಡಿದೆ.
87,403 ಕೃಷಿ ಹೊಂಡ ನಿರ್ಮಾಣ, 4,712 ತೆರೆದ ಬಾವಿ ಹಾಗೂ 312 ಕಲ್ಯಾಣಿಗಳ ಪುನಃಶ್ಚೇತನ, 58,331 ಹೊಸ ಹಾಗೂ ಹಾಲಿ ಇರುವ ಕೆರೆ ಅಭಿವೃದ್ಧಿ, ಕೆರೆ ಹೂಳೆತ್ತುವಿಕೆ, ಗೋಕಟ್ಟೆ ನಿರ್ಮಾಣವನ್ನು ಯೋಜನೆಯಡಿ ಮಾಡಲಾಗುತ್ತಿದೆ.
ಅಲ್ಲದೇ, ಗ್ರಾಮೀಣ ಭಾಗದ ಸರಕಾರಿ ಜಮೀನಿನಲ್ಲಿ 2.29 ಲಕ್ಷ ಅರಣ್ಯೀಕರಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನೂ ಯೋಜನೆಯಡಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ನರೇಗಾ ಹಾಗೂ ಗ್ರಾಮ ಸಡಕ್ ಯೋಜನೆಯ ಜತೆಗೆ ಜಲಶಕ್ತಿ ಅಭಿಯಾನಕ್ಕೂ ಹೆಚ್ಚು ಒತ್ತು ನೀಡಲಾಗಿದೆ.
ಕೇಂದ್ರ ಸರಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೊತ್ತ ದಲ್ಲಿ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮ ಗಾರಿಗೆ ಮೀಸಲಿಡಬೇಕಾಗಿದೆ. ಹೀಗಾಗಿ, ಕಳೆದ ಮಾರ್ಚ್ನಲ್ಲಿ ಜಲ ಮೂಲಗಳನ್ನು ಪುನಃಶ್ಚೇತನಗೊಳಿಸಲು ಜಲಶಕ್ತಿ ಅಭಿಯಾನ ರೂಪಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.